Don't Miss!
- News Namma Metro Service Extend: ಲೋಕಸಭಾ ಚುನಾವಣೆಗಾಗಿ ಮೆಟ್ರೋ ಸೇವೆ ವಿಸ್ತರಣೆ, ಗಮನಿಸಿ
- Automobiles Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವಣ್ಣನ ಜೊತೆ ರೆಬೆಲ್ ಆದಿತ್ಯ ಹೊಸ ಚಿತ್ರ ನಿಜವೇ?
ರೆಬೆಲ್ ಚಿತ್ರದ ಮೂಲಕ ಆದಿತ್ಯ ನಿರ್ಮಾಪಕರಾಗಿದ್ದು ಓದಿದ್ದೀರಾ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕ್ಲಾಪ್ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದ್ದು ಆಯ್ತು. ಎಸ್ ವಿ ಆರ್ ಸಿಂಗ್ ಆಗಿರುವ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರು ತಮ್ಮ ಮಗನನ್ನು ಬೆಳೆಸಲು ರೆಬೆಲ್ ಚಿತ್ರಕ್ಕೆ ಉತ್ತಮ ಕಥೆ ಹೆಣೆದಿದ್ದಾರಂತೆ. ಆದಿತ್ಯ ಹಾಗೂ ಶಿವರಾಜ್ ಜೋಡಿ ಹೊಸ ಚಿತ್ರ ಬರಲಿದೆ ಎಂಬ ಸುದ್ದಿ ಹೊರಬಿದ್ದಿದೆ.
ಈ ಬಗ್ಗೆ ಶಿವಣ್ಣನ ಕೇಳಿದರೆ, ಅದಕ್ಕೇನಂತೆ ರಾಜೇಂದ್ರ ಸಿಂಗ್ ಬಾಬು ಅವರು ಒಳ್ಳೆ ಕಥೆ ರೆಡಿ ಮಾಡ್ಲಿ ಇಬ್ಬರು ಒಟ್ಟಿಗೆ ನಟಿಸ್ತೀನಿ ಅಂದಿದ್ದಾರೆ. ಶಿವಣ್ಣ ಯಾರಿಗೆ ಇಲ್ಲ ಅಂದಿದ್ದಾರೆ ಹೇಳಿ. ಕನ್ನಡ ನಿರ್ಮಾಪಕರ ಪಾಲಿನ ದೈವವಾಗಿರುವ ಶಿವರಾಜ್ ಕುಮಾರ್, ಒಂದರ ಮೇಲೆ ಒಂದು ಚಿತ್ರ ಸೋತರೂ, ಬಿಗ್ ಬ್ಯಾನರ್, ಇಮೇಜ್ ಎಂದು ನೆಚ್ಚಿಕೊಳ್ಳದೆ ಸಾಲು ಸಾಲು ಚಿತ್ರಗಳನ್ನು ಪೂರೈಸುತ್ತಾ ಸೆಂಚುರಿ ಸ್ಟಾರ್ ಎನಿಸಿಕೊಂಡಿದ್ದಾರೆ.
ಈ ಹಿಂದೆ ಎಸ್ ವಿಆರ್ ಸಿಂಗ್ ಬಾಬು ಅವರ ಭೂಮಿ ತಾಯಿ ಚೊಚ್ಚಲ ಮಗ ಹಾಗೂ ಕಾಂಚನ ಗಂಗಾ ಚಿತ್ರಗಳಲ್ಲಿ ಶಿವರಾಜ್ ನಟಿಸಿದ್ದರು. ಚಿತ್ರಗಳು ವಿಮರ್ಶಕ ಮೆಚ್ಚುಗೆ ಗಳಿಸಿದರು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿರಲಿಲ್ಲ. ಶಿವಣ್ಣ ಇದ್ದ ಕಡೆ ವಿದ್ಯುತ್ ಸಂಚಾರವಾದ್ದಂತೆ, ಫುಲ್ ಎನರ್ಜಿಟಿಕ್ ಆಗಿರುತ್ತಾರೆ. ರೆಬೆಲ್ ಚಿತ್ರ ಮುಗಿದ ಮೇಲೆ ಶಿವಣ್ಣ ಹಾಗೂ ಆದಿತ್ಯ ಜೋಡಿ ಸಿನಿಮಾ ಮಾಡುವ ಇಚ್ಛೆ ಇದೆ ಎಂದು ಬಾಬು ಹೇಳಿದರು.
ಬಾಬು ನಂತರ ಮಾತಿಗಿಳಿದ ಶಿವಣ್ಣ, ಸುಮಾರು 67 ವರ್ಷ ಹಳೆ ಬ್ಯಾನರ್, ಅವರ ಕುಟುಂಬದವರ ಪ್ರೀತಿ, ವಿಶ್ವಾಸದ ಋಣ ನನ್ನ ಮೇಲಿದೆ. ಅಭಿಮಾನಿಗಳ ಹಾರೈಕೆಯಿಂದ 100 ಚಿತ್ರ ಪೂರೈಸಿ, 25 ವರ್ಷ ಕಳೆದಿದ್ದೇನೆ. ಬಾಬು ಅವರ ಜೊತೆ ವರ್ಕ್ ಮಾಡೋಕೆ ತುಂಬಾ ಸಂತೋಷವಾಗುತ್ತದೆ ಎಂದರು.
ಶಿವಣ್ಣ ಹಾಗೂ ಅಪ್ಪಾಜಿ ಬಾಬು ಹೊಸ ಸಿನಿಮಾ ಬಗ್ಗೆ ಘೋಷಿಸುತ್ತಿದ್ದಂತೆ, ಚಿಕ್ಕಂದಿನಿಂದ ಶಿವರಾಜ್ ಅವರ ಸಿನಿಮಾ ನೋಡುತ್ತಾ ಬೆಳೆದ ಆದಿ, ಆಗಲೇ ಕನಸಿನ ಲೋಕದಲ್ಲಿ ತೇಲುತ್ತಿದ್ದ. ಆಕಾಶದಲ್ಲಿ ಚಂದಿರನ ಹುಡುಕುತ್ತಿದ್ದ ಆದಿ ಕಣ್ಣಿಗೆ ಏಟ್ರಿಯಾ ಹೋಟೆಲಿನ ಸೀಲಿಂಗ್ ಅಡ್ಡ ಬಂದಿತ್ತು. ಅಷ್ಟರಲ್ಲಿ ಶಿವಣ್ಣನ ಕೈ ಕುಲುಕಿ, ಆದಿ ಬೀಳ್ಕೊಟ್ಟರು.