Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನ್ನಿಯನ್ ವಿಕ್ರಮ್ ಕನ್ನಡಕ್ಕೆ ಕರೆತಂದ ಕೊಬ್ರಿ ಮಂಜು
ಅಂಥ ವಿಕ್ರಮ್ ಈಗ ಕನ್ನಡಕ್ಕೆ ಬರುತ್ತಿದ್ದಾರೆ. ಈ ಸುದ್ದಿ ಕೇಳಿ ಸ್ಯಾಂಡಲ್ ವುಡ್ ಸಿನಿಮಾಪ್ರಿಯರು ರೋಮಾಂಚನಗಿಳ್ಳುವುದು ಗ್ಯಾರಂಟಿ. ಏಕೆಂದರೆ ಅಷ್ಟು ದೊಡ್ಡ ಸ್ಟಾರ್ ಉತ್ತುಂಗದಲ್ಲಿರುವಾಗಲೇ ಕನ್ನಡದಲ್ಲಿ ನಟಿಸುವುದೆಂದರೆ? ಎಂಬ ಪ್ರಶ್ನಾರ್ಥಕ ಚಿನ್ಹೆ ಮೂಡಬಹುದು.
ಆದರೆ ಹೌದು, ಖಂಡಿತ ಕನ್ನಡಕ್ಕೆ ಬರುತ್ತಿದ್ದಾರೆ. ಅವರನ್ನು ಕರೆತರುತ್ತಿರುವವರು ನಿರ್ಮಾಪಕರಾದ ಕೆ. ಮಂಜು. ಇದಕ್ಕೆ ವಿಕ್ರಮ್ ಕೂಡ ಒಪ್ಪಿಕೊಂಡಾಗಿದೆ. ಅದರ ಬಗ್ಗೆ ವಿಕ್ರಮ್ "ಮಂಜು ನನಗೆ ಆಫರ್ ಮಾಡಿರವುದು ಹೌದು. ಮಾತುಕತೆ ನಡೆಯುತ್ತಿದೆ. ಡೇಟ್ಸ್ ಸಮಸ್ಯೆಯಿಂದಾಗಿ ಅಂತಿಮ ತೀರ್ಮಾನ ಆಗಿಲ್ಲ. ನಾನು ಕನ್ನಡದಲ್ಲಿ ನಟಿಸೋದಂತೂ ಖಂಡಿತ" ಎಂದು ಹೇಳಿದ್ದಾರೆ.
ವಿಕ್ರಮ್ ಅವರ ಕಾಲ್ ಶೀಟ್ 2012 ರ ಫೆಬ್ರವರಿ, ಮಾರ್ಚ್ ತನಕ ಬುಕ್ ಆಗಿದ್ದು ಅಲ್ಲಿಯವರೆಗೂ ಕಾಯಲು ಮಂಜು ರೆಡಿ. ಹಾಗಾಗಿ ಕನ್ನಡ ಸಿನಿಮಾದಲ್ಲಿ ವಿಕ್ರಮ್ ನೋಡಲು ಸಿನಿಪ್ರಿಯರು ರೆಡಿ ಆಗಬಹುದು. ವಿಕ್ರಮ್ ಅಂತಿಂಥವರಲ್ಲ, ದೈತ್ಯ ಪ್ರತಿಭೆ. ಕನ್ನಡಿಗರಿಗೆ ಇವರು 'ವಿಜಯ ವಿಕ್ರಮ' ಆಗುವರೇ ಎಣಬುದನ್ನು ಕಾಲವೇ ಹೇಳಬೇಕು.