Don't Miss!
- Finance ಉತ್ತಮ ಕ್ರೆಡಿಟ್ ಸ್ಕೋರ್ ನಿರ್ವಹಿಸಲು ಇರುವ ಆರು ಮಾರ್ಗಗಳು
- Automobiles Tata: ಗಟ್ಟಿಮುಟ್ಟಾದ ಟಿಯಾಗೊ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- News Konkan Railway: ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೇ ವಿಲೀನಕ್ಕೆ ಹೆಚ್ಚಿದ ಒತ್ತಡ
- Technology WhatsApp: ಸ್ಟೇಟಸ್ ಅಪ್ಡೇಟ್ಗಾಗಿ ವಾಟ್ಸಾಪ್ನಲ್ಲಿ ಹೊಸ ಇಂಟರ್ಫೇಸ್!
- Sports Virat Kohli: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದ ಕೆಲವೇ ಕ್ಷಣದಲ್ಲಿ ವಿರಾಟ್ ಕೊಹ್ಲಿ ವಿಡಿಯೋ ಕಾಲ್ನಲ್ಲಿ ಬ್ಯುಸಿ!
- Lifestyle ದೇಶದ 7 ಪ್ರಬಲ ರಾಜಕೀಯ ಕುಟುಂಬಗಳಿವು..! ಎಲ್ಲಾ ಸರ್ಕಾರದಲ್ಲೂ ಇವರದ್ದೇ ಮೇಲುಗೈ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಚಿತ್ರರಂಗದಲ್ಲಿ ಮತ್ತೆ ರಮ್ಯಾ ವಸಂತ ಕಾಲ ಆರಂಭ
ಕನ್ನಡಚಿತ್ರರಂಗದಲ್ಲಿ ತಲೆದೋರಿದ ಅಂತಃ ಕಲಹಗಳಿಂದ ಮನನೊಂದಿದ್ದ ರಮ್ಯಾ ಚಿತ್ರರಂಗಕ್ಕೆ ದಂಡಂ ದಶಗುಣಂ ಎಂದು ನಮಸ್ಕಾರ ಹಾಕಿದ್ದರು. ಈಗ ಸಮಸ್ಯೆ ಮಂಜಿನಂತೆ ಕರಗಿ ಹೋಗಿದೆ. ಇದರಿಂದ ಮತ್ತೆ ಉತ್ಸಾಹದ ಬುಗ್ಗೆಯಂತಾಗಿರುವ ರಮ್ಯಾ ಚಿತ್ರಗಳಲ್ಲಿ ಅಭಿನಯಿಸುವುದಾಗಿ ಹೇಳಿದ್ದಾರೆ. ರಮ್ಯ ವಸಂತಕಾಲ ಮತ್ತೆ ಆರಂಭವಾಗಿದೆ.
"ನನ್ನ ಅಭಿಮಾನಿಗಳಿಗೆ ನಾನು ಚಿತ್ರರಂಗ ಬಿಡುವುದು ಇಷ್ಟವಿಲ್ಲ. ಹಾಗಾಗಿ ಮತ್ತೆ ಬರುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ. ದಂಡಂ ದಶಗುಣಂ ವಿವಾದದ ಕಾರಣ ಮಾಧ್ಯಮಗಳಿಗೂ ದೂರವಾಗಿದ್ದ ರಮ್ಯಾ ಈಗ ಮತ್ತೆ ಮಾಧ್ಯಮಗಳಲ್ಲಿ ದರ್ಶನ ನೀಡುತ್ತಿದ್ದಾರೆ. ರಮ್ಯಾ ಅಭಿಮಾನಿಗಳಿಗೆ ಇದಕ್ಕಿಂತಲೂ ಸಂತಸದ ವಿಷಯ ಇನ್ನೇನು ಬೇಕು.
ಕನ್ನ್ನಡ ಚಿತ್ರರಂಗದ ನಿರ್ಮಾಪಕರೆಲ್ಲಾ ರಮ್ಯಾ ವಿರುದ್ಧ ತೆರೆಮರೆಯ ಕಸರತ್ತುಗಳನ್ನು ನಡೆಸುತ್ತಿದ್ದರೆ, ಮುನಿರತ್ನ ಮಾತ್ರ ರಮ್ಯಾ ಬೆಂಬಲಕ್ಕೆ ನಿಂತಿದ್ದರು. ಈಗ ಅವರೇ ಮುಂದೆ ಬಂದಿದ್ದು ರಮ್ಯಾಗೆ ಒಳ್ಳೆ ಆಫರ್ ನೀಡಿದ್ದಾರೆ. ಚಿತ್ರವನ್ನು ಕೂಡಲೆ ಆರಂಭಿಸುವುದಾಗಿ ಮುನಿರತ್ನ ಘೋಷಿಸಿದ್ದಾರೆ. ರಮ್ಯಾ ಅಭಿನಯದ ಮಥುರಾನಗರಿ, ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್, ಸಿದ್ದಲಿಂಗು, ಸಂಜು ವೆಡ್ಸ್ ಗೀತಾ ಚಿತ್ರಗಳು ಬಿಡುಗಡೆಯಾಗಬೇಕಿವೆ.