Don't Miss!
- News Karnataka rain: ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬೇಕು? ಸಲಹೆಗಳು ಇಲ್ಲಿವೆ
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭರ್ಜರಿ ಒಪನಿಂಗ್: ಗೆಲುವಿನ ಓಟದಲ್ಲಿ ಅರಮನೆ
ಏನೂ ಆಗಿದೆ, ನನಗಂತೂ ಸಂಶಯ, ಕಣ್ಣಲ್ಲೇ ಪರಿಚಯವಾದೆ, ಪತ್ರ ಬರೆಯಲಾ, ಇಲ್ಲಾ ಚಿತ್ರ ಬಿಡಿಸಲಾ ಎನ್ನುವ ಸುಮಧುರ ಹಾಡಿನ ಮೂಲಕ ತೆರೆಯ ಆಖಾಡಕ್ಕಿಳಿದ ಅರಮನೆ ಚಿತ್ರ ರಾಜ್ಯದ್ಯಂತ ಇಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯ ವ್ಯಕ್ತವಾಗಿದೆ. ಭರ್ಜರಿ ನಾಗಾಲೋಟದ ಮುನ್ಸೂಚನೆ ನೀಡಿದೆ.
ಸತತ ಸೋಲಿನಿಂದ ಕಂಗೆಟ್ಟಿದ ಕೆ. ಮಂಜು, ಅರಮನೆ ಚಿತ್ರದ ಮೂಲಕ ಗೆಲುವಿನ ಮುಖ ನೋಡುವುದು ಖಚಿತವಾಗಿದೆ. ಮುಂಗಾರುಮಳೆ ಕಥೆಯನ್ನು ಬರೆದಿದ್ದ ಪ್ರಿತಂ ಗುಬ್ಬಿ ಅರಮನೆ ಚಿತ್ರದ ಕಥೆಯನ್ನು ಬರೆದಿದ್ದು, ಪ್ರಥಮ ಬಾರಿಗೆ ನಿರ್ದೇಶಕರಾಗಿರುವ ನಾಗಶೇಖರ್ ಅವರ ಕೈಚಳಕ ಚಿತ್ರದಲ್ಲಿ ಡಾಳವಾಗಿ ಕಾಣಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಉತ್ತುಂಗದಲ್ಲಿರುವ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿನಯ ಎಲ್ಲರನ್ನು ಆಕರ್ಷಿಸುತ್ತದೆ.
ಚಿತ್ರದ ನಗು ನಗು ಹಾಡಿನಲ್ಲಿ ಏಳು ವಿವಿಧ ಪಾತ್ರಗಳಲ್ಲಿ ಕಾಣುವ ಗಣೇಶ್ ಅವರು ಒಂದೊದು ಪಾತ್ರದಲ್ಲಿ ಕೂಡಾ ಅದ್ಭುತ ಅಭಿನಯವನ್ನು ನೀಡಿದ್ದಾರೆ. ಹಿರಿಯ ನಟ ಅನಂತ್ ನಾಗ್ ಅವರ ಮನೋಜ್ಞ ಅಭಿನಯ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಮಲೆಯಾಳಿ ಬೆಡಗಿ ರೋಮಾ ಅಭಿನಯ ಜನರಿಗೆ ಮೆಚ್ಚುಗೆಯಾಗಿದೆ. ಚಿತ್ರದ ಹಾಡುಗಳು ಎಲ್ಲಕ್ಕಿಂತ ಹೈಲೈಟ್ ಎಂದು ಹೇಳಬಹುದು. ಈ ಚಿತ್ರದಲ್ಲಿರುವ ಎಲ್ಲ ಹಾಡುಗಳು ಮುಂಗಾರುಮಳೆ ಚಿತ್ರದ ಹಾಡಿನಂತೆ ಸುಮಧುರವಾಗಿವೆ. ಈಗಾಗಲೇ ಪಡ್ಡೆ ಹುಡುಗರ ಬಾಯಿಯಲ್ಲಿ ಕೊಲ್ಲೆ ಕೊಲ್ಲೆ ಒಮ್ಮೆ ಕೊಲ್ಲೆ ಎಂಬ ಹಾಡು ಎಲ್ಲರ ಬಾಯಿಯಲ್ಲಿ ನಲಿಯುತ್ತಿದೆ.. ಗುರುಕಿರಣ್ ಅವರ ಸಂಗೀತ ಚಿತ್ರಕ್ಕೆ ವಿಶೇಷ ಮೆರಗನ್ನು ನೀಡಿದೆ.
(ದಟ್ಸ್ ಕನ್ನಡಸಿನಿ ವಾರ್ತೆ)