Just In
Don't Miss!
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Lifestyle
ಆರೋಗ್ಯಕರ ಋತುಚಕ್ರಕ್ಕೆ ಇಲ್ಲಿವೆ ಕೆಲವೊಂದು ಯೋಗಾಸನಗಳು
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕತೆ ಕದ್ದ ಆರೋಪ; ಹೊಸ ವಿವಾದದಲ್ಲಿ ಎಂಧಿರನ್
ಚೆನ್ನೈ ಪೊಲೀಸ್ ಕಮಿಷನರ್ ಅವರಿಗೆ ಕೊಟ್ಟಿರುವ ದೂರಿನಲ್ಲಿ, ತಾವು ರಚಿಸಿದ್ದ 'ಜುಗಿಬಾ' ಎಂಬ ಸಣ್ಣಕತೆ ಆಧಾರವಾಗಿ 'ಎಂಧಿರನ್' ಚಿತ್ರವನ್ನು ತೆರೆಗೆ ತರಲಾಗಿದೆ. ಇನಿಯಾ ಉದಯಂ ಎಂಬ ತಮಿಳು ಪತ್ರಿಕೆಯಲ್ಲಿ ಈ ಕತೆ 1996ರಲ್ಲಿ ಪ್ರಕಟವಾಗಿತ್ತು. ಬಳಿಕ 2007ರಲ್ಲಿ ಪುನರ್ ಮುದ್ರಣ ಕಂಡಿತ್ತು ಎಂದಿದ್ದಾರೆ.
ಭಾರತೀಯ ಕಾಪಿ ರೈಟ್ ಕಾಯಿದೆ ಪ್ರಕಾರ ಮುದ್ರಿತ ಕತೆಯನ್ನು ಚಿತ್ರ ಮಾಡಿರುವ ಬಗ್ಗೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 63ರ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳಬೇಕು ಎಂದು ಆರೂರು ಪೊಲೀಸರಲ್ಲಿ ವಿನಂತಿಸಿದ್ದಾರೆ. ಚಿತ್ರದ ನಿರ್ಮಾಪಕ ಕಲಾನಿಧಿ ಮಾರನ್ ಹಾಗೂ ನಿರ್ದೇಶಕ ಶಂಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅವರು ಕೋರಿದ್ದಾರೆ.
'ಎಂಧಿರನ್' ಚಿತ್ರ ನಿಮ್ಮ ಕತೆಯ ನಕಲಿನಂತಿದೆ. ಚಿತ್ರವನ್ನು ತಾವೇಕೆ ಒಮ್ಮೆ ನೋಡಬಾರದು ಎಂದು ತಮ್ಮ ಓದುಗರು ಹಾಗೂ ಗೆಳೆಯರು ಸೂಚಿಸಿದ್ದರು. ಹಾಗಾಗಿ ಚಿತ್ರಮಂದಿರದಲ್ಲಿ ತಾವು ಚಿತ್ರವನ್ನು ವೀಕ್ಷಿಸಿದೆವು. ಈ ಚಿತ್ರ ತಮ್ಮ ಕತೆಯನ್ನು ಯಥಾವತ್ತಾಗಿ ಕದ್ದು ಚಿತ್ರ ಮಾಡಿರುವ ಅಂಶ ಬೆಳಕಿಗೆ ಬಂದಿದೆ ಎಂದು ಆರೂರು ತಿಳಿಸಿದ್ದಾರೆ.