Don't Miss!
- Technology ಜಿಯೋ ನಿವ್ವಳ ಲಾಭದಲ್ಲಿ ಭರ್ಜರಿ ಹೆಚ್ಚಳ: ಇಲ್ಲಿದೆ ವಿವರ
- Lifestyle ಉಪ್ಪು ನೀರಿನಿಂದ ಮುಖ ತೊಳೆದರೆ ಆಗುವ ಲಾಭವೇನು.? ಇದರ ಅನಾನುಕೂಲವೇನು ಗೊತ್ತಾ?
- Finance ಬೆಂಗಳೂರಿಗೆ ಪ್ರತ್ಯೇಕ ನ್ಯಾವಿಗೇಟಿಂಗ್ ಅಪ್ಲಿಕೇಶನ್, ಟೆಕ್ ಕಂಪೆನಿಯೊಂದಿಗೆ ಒಪ್ಪಂದ
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಮಿಡಿ ಗಣೇಶನ ರೇಟು ಕಾಮಿಡಿ
ಇದು ದಿಟವಾ ? ಅಂಡು ಬಡಿದುಕೊಂಡು ನಗುತ್ತಿದೆ ಗಾಂಧೀನಗರ. ಎರಡು ಕೋಟಿ ಆಕಡೆ ಇರಲಿ, ಅದರ ಅರ್ಧದಷ್ಟೂ ಕೊಡುವುದಕ್ಕೆ ಹೆದರುತ್ತಿದ್ದಾರೆ ನಿರ್ಮಾಪಕರು. ಏಕೆಂದರೆ, ಈ ವರ್ಷ ಬಿಡುಗಡೆ ಆಗಿರುವ ಗಣೇಶನ ನಾಲಕ್ಕು ಚಿತ್ರಗಳ ಪೈಕಿ ಗಾಳಿಪಟ ಒಂದೇ ಗೆದ್ದಿದ್ದು. ಅರಮನೆ ಸುಮಾರಾಗಿ ಓಡಿದರೆ, ಬೊಂಬಾಟ್ ಹಾಗೂ ಸಂಗಮ ಚಿತ್ರ ಅಡ್ಡಡ್ಡ ಉದ್ದುದ್ದ ಮಲಗಿವೆ. ಪ್ರತಿಯೊಂದಕ್ಕೂ ಅಷ್ಟೊಂದು ಲೆಕ್ಕಾಚಾರ ಹಾಕುವ ಗಾಂಧೀನಗರದವರು, ಅಷ್ಟೊಂದು ಕೊಡಲು ಸಾಧ್ಯವಾ? ಎಂದು ಪ್ರಶ್ನಿಸುತ್ತಾರೆ ಗಣೇಶ್ ಚಿತ್ರದ ಒಬ್ಬ ನಿರ್ಮಾಪಕರು.
ಗಣೇಶ್ ರೇಟು ಅಷ್ಟಿದಿಯೋ, ಇಲ್ಲವೋ ಸುದ್ದಿಯಂತೂ ಎಲ್ಲಿಂದಲೋ ಹುಟ್ಟಿಕೊಂಡು ಗಾಂಧೀನಗರವೆಲ್ಲಾ ಸುತ್ತುತ್ತಿದೆ. ಅದನ್ನೇ ದೊಡ್ಡ ಸುದ್ದಿಯೆಂದು ತಿಳಿದು ಪತ್ರಿಕೆಯೊಂದು , ಸುದ್ದಿ ಪ್ರಕಟಿಸುವುದರ ಜತೆಗೆ, ಗಣೇಶ್ ಅಷ್ಟು ಸಂಭಾವನೆ ಹೇರುವುದು ಸರಿಯೋ, ತಪ್ಪೋ ಎಂದು ಡಿಬೇಟು ಪ್ರಾರಂಭಿಸಿದೆ. ಕೆಲಸವಿಲ್ಲದ ಬಡಗಿ ಏನೋ ಮಾಡಿದ್ನಂತೆ ಎನ್ನುವಂತೆ ಆದಿತ್ಯ ಮುಂತಾದ ನಾಯಕರೆಲ್ಲ ಸರಿ, ತಪ್ಪುಗಳ ನಿಷ್ಕರ್ಷೆಯಲ್ಲಿದ್ದಾರೆ. ಗಣೇಶ್ ಮಾತ್ರ ತಮ್ಮ ಪಾಡಿಗೆ ಕೆಲಸ ಮುಂದುವರೆಸಿದ್ದಾರೆ.
( ಸ್ನೇಹಸೇತು : ಹಾಯ್ ಬೆಂಗಳೂರು)