Don't Miss!
- Sports IPL 2024: ಚಿನ್ನಸ್ವಾಮಿಯಲ್ಲಿ ಡಾಗ್ ಔಟ್ ವಲಯ ನಿರ್ಮಾಣ? ಇದರ ಲಾಭವೇನು?
- News ವಸೂಲಿ ಟೈಟಾನ್ಸ್, ಇಂಪ್ಯಾಕ್ಟ್ ಪ್ಲೇಯರ್ ಇ.ಡಿ; ಮೋದಿ, ಬಿಜೆಪಿಯನ್ನು ಅಣಕಿಸಿದ ಮಹಿಳಾ ಕ್ರಿಕೆಟರ್
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಮಿಡಿ ಗಣೇಶನ ರೇಟು ಕಾಮಿಡಿ
ಇದು ದಿಟವಾ ? ಅಂಡು ಬಡಿದುಕೊಂಡು ನಗುತ್ತಿದೆ ಗಾಂಧೀನಗರ. ಎರಡು ಕೋಟಿ ಆಕಡೆ ಇರಲಿ, ಅದರ ಅರ್ಧದಷ್ಟೂ ಕೊಡುವುದಕ್ಕೆ ಹೆದರುತ್ತಿದ್ದಾರೆ ನಿರ್ಮಾಪಕರು. ಏಕೆಂದರೆ, ಈ ವರ್ಷ ಬಿಡುಗಡೆ ಆಗಿರುವ ಗಣೇಶನ ನಾಲಕ್ಕು ಚಿತ್ರಗಳ ಪೈಕಿ ಗಾಳಿಪಟ ಒಂದೇ ಗೆದ್ದಿದ್ದು. ಅರಮನೆ ಸುಮಾರಾಗಿ ಓಡಿದರೆ, ಬೊಂಬಾಟ್ ಹಾಗೂ ಸಂಗಮ ಚಿತ್ರ ಅಡ್ಡಡ್ಡ ಉದ್ದುದ್ದ ಮಲಗಿವೆ. ಪ್ರತಿಯೊಂದಕ್ಕೂ ಅಷ್ಟೊಂದು ಲೆಕ್ಕಾಚಾರ ಹಾಕುವ ಗಾಂಧೀನಗರದವರು, ಅಷ್ಟೊಂದು ಕೊಡಲು ಸಾಧ್ಯವಾ? ಎಂದು ಪ್ರಶ್ನಿಸುತ್ತಾರೆ ಗಣೇಶ್ ಚಿತ್ರದ ಒಬ್ಬ ನಿರ್ಮಾಪಕರು.
ಗಣೇಶ್ ರೇಟು ಅಷ್ಟಿದಿಯೋ, ಇಲ್ಲವೋ ಸುದ್ದಿಯಂತೂ ಎಲ್ಲಿಂದಲೋ ಹುಟ್ಟಿಕೊಂಡು ಗಾಂಧೀನಗರವೆಲ್ಲಾ ಸುತ್ತುತ್ತಿದೆ. ಅದನ್ನೇ ದೊಡ್ಡ ಸುದ್ದಿಯೆಂದು ತಿಳಿದು ಪತ್ರಿಕೆಯೊಂದು , ಸುದ್ದಿ ಪ್ರಕಟಿಸುವುದರ ಜತೆಗೆ, ಗಣೇಶ್ ಅಷ್ಟು ಸಂಭಾವನೆ ಹೇರುವುದು ಸರಿಯೋ, ತಪ್ಪೋ ಎಂದು ಡಿಬೇಟು ಪ್ರಾರಂಭಿಸಿದೆ. ಕೆಲಸವಿಲ್ಲದ ಬಡಗಿ ಏನೋ ಮಾಡಿದ್ನಂತೆ ಎನ್ನುವಂತೆ ಆದಿತ್ಯ ಮುಂತಾದ ನಾಯಕರೆಲ್ಲ ಸರಿ, ತಪ್ಪುಗಳ ನಿಷ್ಕರ್ಷೆಯಲ್ಲಿದ್ದಾರೆ. ಗಣೇಶ್ ಮಾತ್ರ ತಮ್ಮ ಪಾಡಿಗೆ ಕೆಲಸ ಮುಂದುವರೆಸಿದ್ದಾರೆ.
( ಸ್ನೇಹಸೇತು : ಹಾಯ್ ಬೆಂಗಳೂರು)