Don't Miss!
- News ಕಾಂಗ್ರೆಸ್ನಿಂದಲೇ 'ನೇಹಾ ಕೊಲೆ' ತನಿಖೆ ದಾರಿ ತಪ್ಪಿಸಲು ಯತ್ನ: ತಂದೆಯನ್ನೇ ಕೊಲ್ಲಲು ಹೋಗಿದ್ದ ಫಯಾಜ್: ನಿರಂಜನ್ ಹಿರೇಮಠ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾರೆಗಳ ಮನೆಯಲ್ಲಿ ಸಿಕ್ಕಿದ್ದು 40 ಕೋಟಿ ಬೇನಾಮಿ ಹಣ!
ತೆಲುಗು ಸಿನಿಮಾ ತಾರೆಗಳಾದ ಅನುಷ್ಕಾ ಶೆಟ್ಟಿ, ನಾಗಾರ್ಜುನ ಹಾಗೂ ರವಿತೇಜ ಅವರ ಮನೆಗಳ ಮೇಲೆ ಆದಾಯ ತೆರಿಗೆ ದಾಳಿ ನಡೆದದ್ದು ಇಡೀ ಆಂದ್ರದಲ್ಲಿ ಸಂಚಲನ ಮೂಡಿಸಿತ್ತು. ಐಟಿ ದಾಳಿಯಲ್ಲಿ ರು.40 ಕೋಟಿ ಬೇನಾಮಿ ಆಸ್ತಿ ದೊರಕಿದೆ. ಈ ಆಸ್ತಿಗೆ ಸೂಕ್ತ ದಾಖಲೆ ಹಾಗೂ ವಿವರ ನೀಡುವಂತೆ ಆದೇಶಿಸಿ ತಾರೆಗಳಿಗೆ ಆದಾಯತೆರಿಗೆ ಅಧಿಕಾರಿಗಳು ನೋಟೀಸು ಜಾರಿ ಮಾಡಿದ್ದಾರೆ.
ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋ, ಬೆಂಗಳೂರು ಹಾಗೂ ಚೆನ್ನೈನಲ್ಲಿರುವ ಅವರ ಮನೆಗಳ ಮೇಲೂ ಏಕಕಾಲಕ್ಕೆ ದಾಳಿ ನಡೆಸಲಾಗಿತ್ತು. ಅನುಷ್ಕಾ ಶೆಟ್ಟಿ ಅವರ ಹೈದರಾಬಾದ್ ಹಾಗೂ ಬೆಂಗಳೂರು ನಿವಾಸದ ಮೇಲೂ ಐಟಿ ದಾಳಿ ನಡೆದಿತ್ತು. ಮುಂಚಿನಿಂದಲೂ ಈ ತಾರೆಗಳ ಮೇಲೆ ಐಟಿ ಅಧಿಕಾರಿಗಳು ಒಂದು ಕಣ್ಣು ಇಟ್ಟಿದ್ದರು.
ಇವರ ಐಶಾರಾಮಿ ಮನೆಗಳು, ಭೂಮಿ ಖರೀದಿ ವ್ಯವಹಾರಗಳು ಐಟಿ ಅಧಿಕಾರಿಗಳ ಕಣ್ಣು ಕುಕ್ಕಿದ್ದವು. ಪಕ್ಕಾ ಪ್ಲಾನ್ ಪ್ರಕಾರವೇ ಅವರು ದಾಳಿ ಮಾಡಿದಾಗ ತಾರೆಗಳ ಬಂಡವಾಳ ಬಯಲಾಗಿದೆ. ಸೂಕ್ತ ಸಮಯ ನೋಡಿ ಐಟಿ ಅಧಿಕಾರಿಗಳು ಮತ್ತಷ್ಟು ಸಿನಿಮಾ ತಾರೆಗಳ ಮನೆಗಳ ಮೇಲೆ ದಾಳಿ ಮಾಡುವ ಸಾಧ್ಯತೆಗಳಿವೆ.