ಪರಭಾಷೆ ಸಿನಿಮಾ ಬಿಡುಗಡೆ ಕುರಿತಾದ ಸ್ಪಷ್ಟೀಕರಣ

ಆದರೆ ನಿಯಮವನ್ನು ಪಾಲಿಸಲು ತೊಂದರೆ ಆಗಿರುವ ಬಗ್ಗೆ ಅಧ್ಯಕ್ಷರಾದ ಕೆ. ವಿ. ಚಂದ್ರಶೇಖರ್ ವಿಷಾದ ವ್ಯಕ್ತಪಡಿಸಿದ್ದಾರೆ. ಮತ್ತು ಪರಭಾಷೆಯ ಚಿತ್ರಗಳು ಅನಿವಾರ್ಯವಾಗಿ ಬಿಡುಗಡೆ ಆಗುತ್ತಿರುವುದು ಹೇಗೆಂಬ ಬಗ್ಗೆ ಸ್ಷಷ್ಟೀಕರಣ ಕೂಡ ನೀಡಿದ್ದಾರೆ.
"ಕಾರಣವಿಷ್ಟೇ, ನವೆಂಬರ್ ಒಂದಕ್ಕೆ ಕರ್ನಾಟಕ ರಾಜ್ಯೋತ್ಸವ ಇರುವುದರಿಂದ ಸಾಕಷ್ಟು ಕನ್ನಡ ಸಿನಿಮಾಗಳು ಅಂದು ಬಿಡುಗಡೆ ಕಾಣುತ್ತಿವೆ. ಹಾಗಾಗಿ ಈ ದೀಪಾವಳಿಗೆ ಯಾವುದೇ ಕನ್ನಡ ಸಿನಿಮಾ ಇಲ್ಲವಾಗಿ ಪರಭಾಷೆಯ ಚಿತ್ರಗಳು ಆ ಜಾಗಕ್ಕೆ ಬಂದು ಕೂತಿವೆ" ಎಂದಿದ್ದಾರೆ.
"ಆದರೆ ನಮ್ಮಲ್ಲಿ ಕೆಲವು ಚಿತ್ರಮಂದಿರಗಳಲ್ಲಿ ಮಾತ್ರ ಅವು ಬಿಡುಗಡೆ ಆಗಿವೆ ಹಾಗೂ ನಾವು ಕನ್ನಡ ಭಾಷೆಯ ಚಿತ್ರಗಳಿಗೇ ಪ್ರಾಮುಖ್ಯತೆ ಕೊಡಲಿದ್ದೇವೆ" ಎಂದೂ ಕೂಡ ತಿಳಿಸಿದ್ದಾರೆ. ಈಗ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಕನ್ನಡ ಚಿತ್ರಗಳು ಹಾಗೇ ಮುಂದುವರಿಯಲಿವೆ ಕೂಡ.
ಕನ್ನಡ ಚಿತ್ರಗಳು ಕಡಿಮೆ ಬಜೆಟ್ ಹಾಗೂ ಸೀಮಿತ ಮಾರುಕಟ್ಟೆ ಹೊಂದಿರುವುದರಿಂದ ಪ್ರಬಲಸ್ಪರ್ಧೆ ಎದುರಿಸಬೇಕಾಗಿದೆ. ಹಾಗಾಗಿ ಇವುಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ನಾವು ಪ್ರಯತ್ನಿಸಬೇಕಾಗಿದೆ" ಎಂದಿದ್ದಾರೆ. ಒಟ್ಟಿನಲ್ಲಿ ಹೊಸ ಕನ್ನಡ ಚಿತ್ರಗಳಿಲ್ಲದ ದೀಪಾವಳಿಯನ್ನು ಜನ ಆಚರಿಸಬೇಕಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











