ದಂಡುಪಾಳ್ಯ ಗ್ಯಾಂಗ್ನ ಲಕ್ಷ್ಮಿಯಾಗಿ ಪೂಜಾಗಾಂಧಿ
ಚಿತ್ರದ ಪಾತ್ರವರ್ಗದಲ್ಲಿ ರವಿಕಾಳೆ, ಮುನಿ, ಜೈದೇವ್, ಯತಿರಾಜ್ ಮುಂತಾದವರಿದ್ದಾರೆ. ದಂಡುಪಾಳ್ಯ ಎಂಬ ಊರು ಬೆಂಗಳೂರು ಚೆನ್ನೈ ನ್ಯಾಶನಲ್ ಹೈವೇ ನಂಬರ್ 4ರಲ್ಲಿ ಹೊಸಕೋಟೆ ಸಮೀಪವಿದೆ. ದಂಡುಪಾಳ್ಯದ ಕೆಲವರು ಬೆಂಗಳೂರು ಸುತ್ತಮುತ್ತ ದರೋಡೆ, ಕೊಲೆ ಸುಲಿಗೆಗೆ ಇಳಿದ ಕಾರಣ 1999 ಹಾಗೂ 20೦1ರಲ್ಲಿ ಈ ಊರು ಖ್ಯಾತಿಗೆ ಬಂತು.
ಬೆಂಗಳೂರಿನ ಸುತ್ತಮುತ್ತ 75ಕ್ಕೂ ಅಧಿಕ ಕೊಲೆ, ದರೋಡೆ ಪ್ರಕರಣಗಳನ್ನು ಮಾಡುವ ಮೂಲಕ ದಂಡುಪಾಳ್ಯ ಗ್ಯಾಂಗ್ ಕುಖ್ಯಾತಿ ಪಡೆಯಿತು. ಒಂಟಿ ಮಹಿಳೆಯರು ಇರುವ ಮನೆಯನ್ನು ದುಷ್ಕರ್ಮಿಗಳು ಗುರುತಿಸುತ್ತಿದ್ದರು. ಮನೆಯೊಳಗೆ ನುಗ್ಗುತ್ತಿದ್ದ ಅವರು ಕತ್ತು ಸೀಳಿ ಕೊಲೆ ಮಾಡಿ ಆಭರಣ, ಹಣ ದೋಚುತ್ತಿದ್ದರು. ಈ ತಂಡದ ಕೃತ್ಯವನ್ನು ಭೇದಿಸಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು.
ಈ ಗ್ಯಾಂಗ್ನ ಭೇಟೆಯಾಡಿದ ಪೊಲೀಸರು, ವೆಂಕಟೇಶ, ದೊಡ್ಡಹನುಮ, ನಲ್ಲತಿಮ್ಮ, ಮುನಿಕೃಷ್ಣ ಮತ್ತು ಲಕ್ಷ್ಮಿ ಎಂಬುವವರನ್ನು ಬಂಧಿಸಿದ್ದರು. ಈ ಐದೂ ಮಂದಿಗೆ ಈ ಹಿಂದೆ ಹದಿನಾಲ್ಕು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಯಾಗಿತ್ತು. ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಕೂಡ ಇವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











