Don't Miss!
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Automobiles ಮತ್ತೆ ಅಖಾಡಕ್ಕೆ ಅಮೇರಿಕನ್ ಆಫ್ರೋಡ್ ಕಿಂಗ್: 2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ರಿವ್ಯೂ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೀಟ್ ದಿ ಪ್ರೆಸ್ನಲ್ಲಿ ಕಥೆಗಾರ ಮಂಜಣ್ಣ
ಮೀಟ್ ದಿ ಪ್ರೆಸ್ನ ಮೊದಲ ಅತಿಥಿ ನಿರ್ಮಾಪಕ ಕೆ.ಮಂಜು. ತಮ್ಮ ಬಾಲ್ಯದ ದಿನಗಳಿಂದ ಹಿಡಿದು ಉದ್ಯಮಕ್ಕೆ ಬಂದ ಎಲ್ಲಾ ಕ್ಷಣಗಳನ್ನು ಮಂಜು ಮೆಲುಕು ಹಾಕಿದರು. ಇದರಲ್ಲಿ ಸತ್ಯ ಎಷ್ಟು ಅನ್ನೋದಷ್ಟೇ ಜಿಜ್ಞಾಸೆ. ಯಾಕೆಂದರೆ, ಮಂಜು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಉದ್ಯಮಕ್ಕೆ ಹೋದ ವರ್ಷ 350 ಕೋಟಿ ಲಾಸ್ ಆಗಿದೆ ಅಂತ ಪುಗ್ಗೆ ಹಾರಿಸಿದ್ದು, ಮಾತಾಡ್ ಮಾತಾಡ್ ಮಲ್ಲಿಗೆ ಸಿನಿಮಾಗೆ ಐದು ಕೋಟಿ ಖರ್ಚಾಗಿದೆ ಅಂತ ಬೂಸಿ ಬಿಟ್ಟಿದ್ದು ಇದೇ ಮಂಜು. ಗೋವಾ ಚಿತ್ರೋತ್ಸವಕ್ಕೆ ಬಂದು, ಸಿನಿಮಾ ನೋಡದೆ ಬೀಚ್ಗಳಲ್ಲಿ ಅಡ್ಡಾಡಿಕೊಂಡು ಬಂದದ್ದೂ ಇದೇ ಮಂಜು.
ಇಂತಿಪ್ಪ ಮಂಜು ಅವರೇ ಮೀಟ್ ದಿ ಪ್ರೆಸ್ ಅತಿಥಿಯಾಗಿದ್ದು ಯಾಕೆ? ಉತ್ತರ ಸರಳ. ನಿರ್ಮಾಪಕರ ಸಂಘದ ಬಗೆಗೆ ಬೇಸರ ಇರುವವರ ಪೈಕಿ ಅವರೂ ಒಬ್ಬರು. ಸಂಘದ ನಡಾವಳಿಗಳ ವಿರುದ್ಧ ಅವರು ಮಾತಾಡುವ ಸಾಧ್ಯತೆ ಹೆಚ್ಚು. ಆದರೆ, ಮೀಟ್ ದಿ ಪ್ರೆಸ್ನಲ್ಲಿ ಅವರು ವಾಚಾಮಗೋಚರವಾಗಿ ಸಂಘವನ್ನೇನೂ ದೂರಲಿಲ್ಲ!
'ಪತ್ರಕರ್ತರು ಇನ್ನೆಷ್ಟು ಕುಡಿದಾರು? ಹಾಗೆ ನೋಡಿದರೆ, ರಾತ್ರಿ ಹೊತ್ತು ಊಟಕ್ಕೆ ಉಳಿಯುವವರೂ ಕಡಿಮೆ. ನಿರ್ಮಾಪಕರು ತಮ್ಮವರನ್ನೆಲ್ಲಾ ಕರೆಸಿ, ಪಾನೋಪಚಾರ ಮಾಡಿ ಹಣ ಖರ್ಚಾಯಿತು ಅಂತ ಬೊಬ್ಬೆ ಹೊಡೆಯುವುದರಲ್ಲಿ ಯಾವ ಅರ್ಥವು ಇಲ್ಲ' ಅನ್ನೋದು ಮಂಜು ನುಡಿಮುತ್ತು.
ಈ ಸಮಸ್ಯೆಯನ್ನು ಬಗೆಹರಿಸುವ ಆಶ್ವಾಸನೆಯನ್ನು ಅವರು ಕೊಟ್ಟಿದ್ದಾರೆ. ಅಂದಹಾಗೆ, ಮೀಟ್ ದಿ ಪ್ರೆಸ್ನಲ್ಲಿ ಕೆಲವು ಸುದ್ದಿಮಿತ್ರರು ಹೆಮ್ಮೆಯಿಂದ ಶರಾಬು ಗಲಾಸನ್ನು ಕೈಲಿ ಹಿಡಿದೇ ಮಂಜು ಮಾತಿಗೆ ಕಿವಿ ಕೊಟ್ಟಿದ್ದರು! ಆತಿಥೇಯರೇ ಅತಿಥಿಗಳಾದಾಗ ಇಂಥ ಅಭಾಸಗಳು ಸಹನೀಯವೇನೊ!?
ಪೂರಕ
ಓದಿಗೆ:
ಗುಂಡು
ಪಾರ್ಟಿ
ನಿಷೇಧ
ಚಿತ್ರಾನ್ನ!
ಚಿತ್ರಾನ್ನ?
ಇದು
ಮೂರನೆ
ದರ್ಜೆ
ಪ್ರಶಸ್ತಿ:
ಚಂದ್ರು
ಮಂಜು
ಅಗ್ನಿ
ಶ್ರೀಧರ್
ಮತ್ತು
ಮಂಜುರಿಂದ
ಪ್ರಶಸ್ತಿ
ತಿರಸ್ಕಾರ
ವಿವಾದಗಳ
ಮಟ್ಟಿಗೂ
2008
ಉಬ್ಬರದ
ವರ್ಷ