Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಧಾಮೂರ್ತಿ ಈಗ ಕಸಾಪ ವಿದ್ಯಾರ್ಥಿನಿ!
ಸದಾಶಿವ ಶೆಣೈ ನಿರ್ದೇಶನದ ಚೊಚ್ಚಲನ ಚಿತ್ರ 'ಪ್ರಾರ್ಥನೆ'ಯ ನಟಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಈಗೇನು ಮಾಡುತ್ತಿದ್ದಾರೆ. ಈಗವರು ಡಿಪ್ಲೊಮಾ ವಿದ್ಯಾರ್ಥಿನಿ! ಈ ವಯಸ್ಸಿನಲ್ಲಿ ಅವರು ಏನನ್ನು ಕಲಿಯುತ್ತಿದ್ದಾರೆ ಎಂದು ಆಶ್ಚರ್ಯವಾಗುತ್ತಿದೆಯೇ?
ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಶಾಸನ ಶಾಸ್ತ್ರದ ಡಿಪ್ಲೊಮಾ ತರಗತಿಗಳಿಗೆ ಸುಧಾಮೂರ್ತಿ ಹಾಜರಾಗುತ್ತಿದ್ದಾರೆ. ಸುಧಾಮೂರ್ತಿ ಅವರ ಆಸಕ್ತಿ ಕ್ಷೇತ್ರಗಳು ಎಂಥಹವರನ್ನು ಬೆರಗುಗೊಳಿಸುತ್ತವೆ. ಅವರ ಕಲಿಕೆಯ ಉತ್ಸಾಹಕ್ಕೆ ಮೂಕ ವಿಸ್ಮಿತರಾಗಬೇಕು. ಮೂಲತಃ ವಿಜ್ಞಾನ ವಿದ್ಯಾರ್ಥಿಯಾದ ಸುಧಾಮೂರ್ತಿ ಇದೀಗ ಇತಿಹಾಸದ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.
ಪಿ ವಿ ಕೃಷ್ಣಮೂರ್ತಿಗಳು ತೆಗೆದುಕೊಳ್ಳುವ ಶಾಸನ ಲಿಪಿ ತರಗತಿ ಎಂದರೆ ಸುಧಾಮೂರ್ತಿ ಅವರಿಗೆ ವಿಶೇಷ ಆಸಕ್ತಿ | |
ಪಿ ವಿ ಕೃಷ್ಣಮೂರ್ತಿಗಳು ತೆಗೆದುಕೊಳ್ಳುವ ಶಾಸನ ಲಿಪಿ ತರಗತಿ ಎಂದರೆ ಸುಧಾಮೂರ್ತಿ ಅವರಿಗೆ ವಿಶೇಷ ಆಸಕ್ತಿಯಂತೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಜೆ 6ರಿಂದ 7 ಗಂಟೆಯ ತನಕ ತರಗತಿಗಳು ನಡೆಯುತ್ತವೆ. ಸುಧಾಮೂರ್ತಿ ಅವರು ಕೋರ್ಸ್ ಗೆ ಸೇರಿಸುವ ಮುನ್ನ ಅರ್ಜಿ ಸಲ್ಲಿಸಲು ಕಾಲ ಮುಗಿದಿತ್ತು. ಆದರೆ ತಾವು ಪರೀಕ್ಷೆಗಾಗಿ ಬರುತ್ತಿಲ್ಲ. ಕಲಿಯಲು ಬರುತ್ತಿರುವುದಾಗಿ ಕಸಾಪ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಅವರ ಬಳಿ ವಿನಂತಿಸಿದಾಗ ಅವರು ಅವಕಾಶ ಕಲ್ಪಿಸಿದ್ದಾರೆ.