Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಧಾಮೂರ್ತಿ ಈಗ ಕಸಾಪ ವಿದ್ಯಾರ್ಥಿನಿ!
ಸದಾಶಿವ ಶೆಣೈ ನಿರ್ದೇಶನದ ಚೊಚ್ಚಲನ ಚಿತ್ರ 'ಪ್ರಾರ್ಥನೆ'ಯ ನಟಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಈಗೇನು ಮಾಡುತ್ತಿದ್ದಾರೆ. ಈಗವರು ಡಿಪ್ಲೊಮಾ ವಿದ್ಯಾರ್ಥಿನಿ! ಈ ವಯಸ್ಸಿನಲ್ಲಿ ಅವರು ಏನನ್ನು ಕಲಿಯುತ್ತಿದ್ದಾರೆ ಎಂದು ಆಶ್ಚರ್ಯವಾಗುತ್ತಿದೆಯೇ?
ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಶಾಸನ ಶಾಸ್ತ್ರದ ಡಿಪ್ಲೊಮಾ ತರಗತಿಗಳಿಗೆ ಸುಧಾಮೂರ್ತಿ ಹಾಜರಾಗುತ್ತಿದ್ದಾರೆ. ಸುಧಾಮೂರ್ತಿ ಅವರ ಆಸಕ್ತಿ ಕ್ಷೇತ್ರಗಳು ಎಂಥಹವರನ್ನು ಬೆರಗುಗೊಳಿಸುತ್ತವೆ. ಅವರ ಕಲಿಕೆಯ ಉತ್ಸಾಹಕ್ಕೆ ಮೂಕ ವಿಸ್ಮಿತರಾಗಬೇಕು. ಮೂಲತಃ ವಿಜ್ಞಾನ ವಿದ್ಯಾರ್ಥಿಯಾದ ಸುಧಾಮೂರ್ತಿ ಇದೀಗ ಇತಿಹಾಸದ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.
ಪಿ ವಿ ಕೃಷ್ಣಮೂರ್ತಿಗಳು ತೆಗೆದುಕೊಳ್ಳುವ ಶಾಸನ ಲಿಪಿ ತರಗತಿ ಎಂದರೆ ಸುಧಾಮೂರ್ತಿ ಅವರಿಗೆ ವಿಶೇಷ ಆಸಕ್ತಿ | |
ಪಿ ವಿ ಕೃಷ್ಣಮೂರ್ತಿಗಳು ತೆಗೆದುಕೊಳ್ಳುವ ಶಾಸನ ಲಿಪಿ ತರಗತಿ ಎಂದರೆ ಸುಧಾಮೂರ್ತಿ ಅವರಿಗೆ ವಿಶೇಷ ಆಸಕ್ತಿಯಂತೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಜೆ 6ರಿಂದ 7 ಗಂಟೆಯ ತನಕ ತರಗತಿಗಳು ನಡೆಯುತ್ತವೆ. ಸುಧಾಮೂರ್ತಿ ಅವರು ಕೋರ್ಸ್ ಗೆ ಸೇರಿಸುವ ಮುನ್ನ ಅರ್ಜಿ ಸಲ್ಲಿಸಲು ಕಾಲ ಮುಗಿದಿತ್ತು. ಆದರೆ ತಾವು ಪರೀಕ್ಷೆಗಾಗಿ ಬರುತ್ತಿಲ್ಲ. ಕಲಿಯಲು ಬರುತ್ತಿರುವುದಾಗಿ ಕಸಾಪ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಅವರ ಬಳಿ ವಿನಂತಿಸಿದಾಗ ಅವರು ಅವಕಾಶ ಕಲ್ಪಿಸಿದ್ದಾರೆ.