Don't Miss!
- News ಬಂಡೀಪುರ: ಹುಲಿ ದಾಳಿಯಿಂದ ಮರಿಯಾನೆ ಸಾವು, ನಡುರಸ್ತೆಯಲ್ಲೇ ಮುಗಿಲು ಮುಟ್ಟಿದ ತಾಯಿಯ ಆಕ್ರಂದನ, ವಿಡಿಯೋ ವೈರಲ್
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದಲ್ಲಿ ಆಲ್ಬಂ ತರಲು ಸೋನು ಉತ್ಸಾಹ
ಬೆಂಗಳೂರು, ಜ.26: ಗಾಯಕ ಸೋನು ನಿಗಮ್ ಸಂಗೀತ ಧ್ವನಿ ಸುರುಳಿಯ ಸಂಗ್ರಹ(ಆಲ್ಬಂ) ಒಂದನ್ನು ಕನ್ನಡದಲ್ಲಿ ತರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಅವರ ಕಂಠಸಿರಿಯ ಹಿಂದಿ ಪಾಪ್ ಗೀತೆಗಳು ಕೇಳುಗರ ಮನಸೂರೆಗೊಂಡಿದ್ದವು. ಈಗ ಕನ್ನಡದ ಶ್ರೋತೃಗಳಿಗೆ ಅದೇ ಉಲ್ಲಾಸ ತರಲಿದ್ದಾರೆ. ಶೀಘ್ರದಲ್ಲೇ ಅದರ ವಿವರಗಳನ್ನು ತಿಳಿಸುವುದಾಗಿ ಅವರು ಹೇಳಿದ್ದಾರೆ.
ಅದೇ ಭೂಮಿ ಅದೇ ಭಾನು, ನೀ ಶೀತಲ ನೀ ಕೋಮಲ, ಓ ಗುಣವಂತ, ಏನೋ ಒಂಥರಾ, ಅನಿಸುತಿದೆ ಯಕೋ ಇಂದು, ಮುಂಗಾರು ಮಳೆಯೆ ಏನು ನಿನ್ನಯ ಲೀಲೆ...ಮುಂತಾದ ಇತ್ತೀಚಿನ ಹಾಡುಗಳು ಕೇಳುಗರ ಮನ ತಣಿಸಿದ್ದವು. ಈಗ ಅವರ ಕಂಠಸಿರಿಯಲ್ಲಿ ಹೊರ ಬರುವ ಆಲ್ಬಂ ಹೇಗಿರುತ್ತದೋ ಏನೋ ಎಂದು ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಉಂಟಾಗಿದೆ.
ಗೆಳೆಯ, ಮುಂಗಾರು ಮಳೆ, ಗಾಳಿಪಟ, ಈ ಬಂಧನ...ಚಿತ್ರಗಳಲ್ಲಿ ಅವರು ಹಾಡಿದ ಹಾಡುಗಳು ಸಾಕಷ್ಟು ಜನಪ್ರಿಯತೆ ಗಳಿಸಿದ್ದವು. ಈಗವರು ಕನ್ನಡದ ಮನೆಮಾತಾಗಿ ಹೋಗಿದ್ದಾರೆ. ತಮಿಳು, ತೆಲುಗು, ಪಂಜಾಬಿ, ಮರಾಠಿ, ಬೆಂಗಾಲಿ, ಹಿಂದಿ ಭಾಷೆಗಳಲ್ಲಿ ಸಹಾ ಅವರು ಹಾಡಿದ ಹಾಡುಗಳು ಜನಪ್ರಿಯವಾಗಿವೆ.
ಮುಂಗಾರು ಮಳೆಯ ಅನಿಸುತಿದೆ ಯಾಕೋ ಇಂದು... ಹಾಡಂತೂ ಮೊಬೈಲ್ಗಳಲ್ಲಿ, ದೂರದರ್ಶನ, ಆಕಾಶವಾಣಿ, ಬಸ್ಸು, ಅಂಗಡಿ, ಆಟೋ, ಜಾತ್ರೆ, ಉತ್ಸವಗಳಲ್ಲಿ...ಎಲ್ಲೆಲ್ಲಿ ನೋಡಿದರೂ ಅದೇ ಹಾಡು. ಈಗ ಬರಲಿರುವ ಅವರ ಕನ್ನಡದ ಆಲ್ಬಂ ಅದೇ ರೀತಿ ಮೋಡಿ ಮಾಡಲಿದೆಯೆ ಎಂಬುದನ್ನು ಕಾದು ನೋಡಬೇಕಾಗಿದೆ.
(ದಟ್ಸ್ಸಿನಿ ವಾರ್ತೆ)