Don't Miss!
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನರಂಜನಾ ತೆರಿಗೆ ಪರಿಷ್ಕರಣೆಗೆ ಮಾತುಕತೆಯ ಭರವಸೆ
ಬೆಂಗಳೂರು : ರಾಜಧಾನಿಯ ಕೇಬಲ್ ಆಪರೇಟರ್ಗಳು ಏಪ್ರಿಲ್ 25ರ ಸಂಜೆ ತಮ್ಮ ಮುಷ್ಕರವನ್ನು ವಾಪಸ್ಸು ಪಡೆಯುವುದರೊಂದಿಗೆ ನಗರದ ಮನೆಮನೆಗಳ ಟೀವಿ ಪರದೆಗಳು ಮತ್ತೆ ಮಾತನಾಡಿದವು.
ಉನ್ನತ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ಫಲಕೊಟ್ಟಿದೆ. ಮನರಂಜನಾ ತೆರಿಗೆಯನ್ನು ಪುನರ್ ಪರಿಶೀಲಿಸುವಂತೆ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ವಾಣಿಜ್ಯ ತೆರಿಗೆ ಆಯುಕ್ತ ಎ.ಸಿ.ಮನೋಳಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ಶುಕ್ರವಾರ ಸಂಜೆಯಿಂದ ವಾಪಸ್ಸು ಪಡೆಯಲಾಗಿದೆ ಎಂದು ಕೇಬಲ್ ಆಪರೇಟರ್ಗಳ ಸಂಘದ ವಕ್ತಾರ ಕೆ.ಆರ್.ಲೋಕೇಶ್ ತಿಳಿಸಿದ್ದಾರೆ.
ಮನರಂಜನಾ ತೆರಿಗೆಯನ್ನು ಮೂರು ಸಾವಿರ ರುಪಾಯಿಯಿಂದ ಏಳೂವರೆ ಸಾವಿರ ರುಪಾಯಿಗೆ ಏಕಾಏಕಿ ಹೆಚ್ಚಿಸಿದ ಸರ್ಕಾರವನ್ನು ವಿರೋಧಿಸಿ ಬೆಂಗಳೂರು ನಗರ ಕೇಬಲ್ ಆಪರೇಟರ್ಗಳು ಏಪ್ರಿಲ್ 24ರಿಂದ ಅನಿರ್ದಿಷ್ಟ ಕಾಲದವರೆಗೆ ‘ಕೇಬಲ್ ಟೀವಿ ಬಂದ್’ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಕೇಬಲ್ ಟೀವಿ ಆಪರೇಟರ್ಗಳ ಮುಷ್ಕರದಿಂದಾಗಿ ಬೆಂಗಳೂರು ನಗರದಲ್ಲಿ ಗುರುವಾರ ಹಾಗೂ ಶುಕ್ರವಾರ ವಿಸಿಡಿ ಅಂಗಡಿಗಳಲ್ಲಿ ಬಿರುಸಿನ ವ್ಯಾಪಾರ ನಡೆದಿದೆ.
(ಇನ್ಫೋ ವಾರ್ತೆ)
ಪೂರಕ
ಓದಿಗೆ-
ಮುಖಪುಟ
/
ಸ್ಯಾಂಡಲ್ವುಡ್