Don't Miss!
- News Soumya Reddy in Tirupati:ಸೌಮ್ಯ ರೆಡ್ಡಿ ಫೋಟೋ ಹಿಡಿದು ತಿರುಪತಿ ದೇವಸ್ಥಾನದ ಮುಂದೆ ಫೋಸ್ ಕೊಟ್ಟ ಭಕ್ತ!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Automobiles ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭರತನಾಟ್ಯ, ಕಥಕ್ಕಳಿ ಕಲಿತಿರುವ ರಕ್ಷಿತಾ ಅರಂಗೇಟ್ರಂ ಅಪ್ಪು ಮೂಲಕ ಆಗಿದೆ.
ನಗಬೇಕಮ್ಮಾ
ನಗಬೇಕು
ಎಲ್ಲರ
ನಗಿಸುತಲಿರಬೇಕು
!
ನವ
ನಾಯಕಿ
ರಕ್ಷಿತಾಗೆ
ಪೂರಿ
ಜಗನ್ನಾಥ್
ಪದೇಪದೇ
ಈ
ಮಾತು
ಹೇಳಿದ್ದರು.
ಯಾಕೆಂದರೆ,
ರಕ್ಷಿತಾಗೆ
ನಗೋದು
ಕಷ್ಟ,
ಅಳೋದು
ಇಷ್ಟ.
ಅಳುವಿನಲ್ಲಿ
ಪಂಚ್
ಇರುತ್ತದೆ,
ಭಾವ
ಬಯಲಾಗುತ್ತದೆ.
ನಟಿಸಲೆಂದು
ನಗುವುದು
ಎಷ್ಟೋ
ಸಲ
ನಗೆಪಾಟಲು...
ಏಪ್ರಿಲ್ 26ರಂದು ತೆರೆ ಕಂಡಿರುವ ಅಪ್ಪು ನಾಯಕಿ ರಕ್ಷಿತಾ ಮಾತುಗಳಲ್ಲಿ ವಯಸ್ಸಿಗೆ ಮೀರಿದ ಪ್ರಬುದ್ಧತೆ ವ್ಯಕ್ತ. ಆಕೆಯ ಮಾತುಗಳು, ಅವುಗಳ ನಡುವಿನ ವ್ಯಾಕ್ಯುಮ್ ಅದಕ್ಕೆ ಹಿಡಿದ ಕನ್ನಡಿ. ಐದಡಿ ನಾಲ್ಕಿಂಚಿನ ರಕ್ಷಿತಾ ನಗುಮುಖದ ಹುಡುಗಿ. ಸಿನಿಮಾ ನಂಟು ಆಕೆಗೆ ರಕ್ತಗತವಾಗಿ ಬಂದದ್ದು. ಅಮ್ಮ ಮಮತಾ ರಾವ್ ಒಂದಾನೊಂದು ಕಾಲದಲ್ಲಿ ಕಿರುತೆರೆ, ಸಿನಿಮಾಗಳಲ್ಲಿ ಮೆರೆದವರು. ಅಪ್ಪ ಗೌರೀಶಂಕರ್ ಬಿ.ಸಿ.ಗೌರೀಶಂಕರ್ ಪ್ರಸಿದ್ಧ ಸಿನಿ ಛಾಯಾಗ್ರಾಹಕರು. ಹೀಗಿದ್ದೂ ಅಪ್ಪುವಿನ ಮೊದಲ ಶಾಟ್ ಎದುರಿಸುವಾಗ ರಕ್ಷಿತಾಗಿ ತುಂಬಾ ಗಾಬರಿಯಾಗಿತ್ತಂತೆ. ಪೂರಿ ಜಗನ್ನಾಥ್ಗೆ ಒಂದೇ ಟೇಕ್ಗೆ ಶಾಟ್ ಓಕೆ ಅಂದಾಗ, ರಕ್ಷಿತಾಗೆ ಏನನ್ನೋ ಸಾಧಿಸಿದ ಖುಷಿ.
ಅಪ್ಪು ಥೇಟ್ ಅಪ್ಪನ ತರಹ. ನಟನೆ, ಸ್ವಭಾವ, ಸಹಕಾರ ಎಲ್ಲದರಲ್ಲೂ ಗ್ರೇಟ್. ಸುದೀಪ್ ನನ್ನ ಗೆಳೆಯ. ಹುಚ್ಚ ಚಿತ್ರವನ್ನು ಹುಚ್ಚಿಯಂತೆ ನೋಡಿದ್ದೇನೆ. ನಾನು ನಾಯಕಿಯಾಗುವ ಚಿತ್ರಗಳಲ್ಲೆಲ್ಲಾ ಅವರನ್ನೇ ನಾಯಕನಾಗಿ ಕಲ್ಪಿಸಿಕೊಂಡು ಖುಷಿ ಪಟ್ಟಿರುವುದೂ ಉಂಟು. ಸುದೀಪ್ ಜೊತೆ ನಟಿಸುವುದು ನನ್ನ ಕನಸಾಗಿತ್ತು. ಧಮ್ ಮೂಲಕ ಅದು ನನಸಾಗಿದೆ. ಹಾಗೆಯೇ ರವಿಚಂದ್ರನ್ ಜೊತೆ ನಟಿಸುವ ಆಸೆಯೂ ಇದೆ. ನಾನು ನೋಡಿದ ಮೊದಲ ಚಿತ್ರ ಪ್ರೇಮಲೋಕ. ಆರ್ಟ್ ಸಿನಿಮಾ ನೋಡೋದು ನಂಗಿಷ್ಟ. ಆದರೆ, ಯಾಕೋ ಲಗಾನ್ ನನಗೆ ಹಿಡಿಸಲಿಲ್ಲ....
ಕೆಎಸ್ಸಿಎ ಕ್ಲಬ್ನಲ್ಲಿ ಕರೆದಿದ್ದ ಔತಣಕೂಟದಲ್ಲಿ ರಕ್ಷಿತಾ ಪಟಪಟನೆ ಮಾತಾಡುತ್ತಿದ್ದಳು. ಆಕೆಯ ಮಾತಲ್ಲಿ ಆತ್ಮವಿಶ್ವಾಸ ಭರಪೂರ. ಅಣ್ಣಾವ್ರ ಕುಟುಂಬಕ್ಕೆ ಈಕೆ ಹಳಬಳು. ಚಿಕ್ಕಂದಿನಲ್ಲೇ ಅವರ ಮನೆಗೆ ಹೋಗಿ, ಬರುತ್ತಿದ್ದುದುಂಟು. ಆಮೇಲೆ ಒಂದು ಕಾಲು ಮುಂಬಯಿಯಲ್ಲಿ, ಒಂದು ಕಾಲು ಬೆಂಗಳೂರಲ್ಲಿ ಅನ್ನುವಂತಾಯಿತು. ಈ ಕಾರಣಕ್ಕೇ ರಕ್ಷಿತಾಗೆ ಮರಾಠಿ, ಹಿಂದಿ, ಗುಜರಾತಿ ಭಾಷೆಗಳೂ ಗೊತ್ತು. ಮಹಾವೀರ್ ಜೈನ್ ಕಾಲೇಜಿನಲ್ಲಿ ಬಿಸಿಎ ಮಾಡುತ್ತಿದ್ದ ರಕ್ಷಿತಾಗೆ ತಾನು ನಟಿಯಾಗಬೇಕು ಅನ್ನುವ ಇರಾದೆಯೇ ಇರಲಿಲ್ಲ. ಆರು ತಿಂಗಳ ಹಿಂದೆ ಅಪ್ಪುಗೆ ಆಫರ್ ಬಂದಾಗ, ಕಾಲೇಜು ಬಿಡಬೇಕೋ ಬೇಡವೋ ಎಂಬ ಗೊಂದಲಕ್ಕೆ ಸಿಲುಕಿದ್ದುಂಟು. ಕೊನೆಗೆ ಅಪ್ಪುವನ್ನು ಒಪ್ಪಿದಳು. ಕಾಲೇಜಿಗೆ ಟಾಟಾ ಮಾಡಿದಳು. ಆದರೂ ಓದನ್ನು ಬಿಟ್ಟಿಲ್ಲ. ಎಕ್ಸ್ಟರ್ನಲ್ ಬಿಎ ಮಾಡುತ್ತಿದ್ದಾಳೆ.
ರಕ್ಷಿತಾ
ಕಣ್ಣು
ತುಂಬಿ
ಬಂದ
ಕ್ಷಣಗಳು....
ಕಾಲೇಜಿಗೆ
ಟಾಟಾ
ಹೇಳಿದಾಗ
ಮತ್ತು
ಪಾರ್ವತಮ್ಮ
ರಾಜ್ಕುಮಾರ್
ಹೊಗಳಿ
ಆಶೀರ್ವದಿಸಿದಾಗ,
ರಕ್ಷಿತಾ
ಕಣ್ಣಾಲಿಯಲ್ಲಿ
ನೀರು.
ಅಪ್ಪು
ಸೆಟ್ನಲ್ಲಿ
ಮೊದಲ
ಬಾರಿ
ಕೆಮೆರಾ
ಎದುರಿಸುವ
ಮುನ್ನ
ಅಪ್ಪಾಜಿ
ನೋಡಿ,
ಏನಮ್ಮಾ
ಇಷ್ಟು
ಬೆಳೆದುಬಿಟ್ಟಿದ್ದೀಯಾ
ಅಂತ
ಬೆನ್ನು
ತಣ್ಣಿದಾಗಲೂ
ತುಟಿಗಳು
ಬಿಗಿದುಕೊಂಡದ್ದು
ನಿಜ.
ಅಪ್ಪುವಿನ ತೆಲುಗು ರೀಮೇಕ್ನಲ್ಲೂ ರಕ್ಷಿತಾ ನಾಯಕಿ. ರವಿತೇಜ್ ಅದರ ನಾಯಕ. ಹಿಂದಿಯಲ್ಲಿ ನಟಿಸುವುದು ಈಕೆಯ ಕನಸು. ಸುದೀಪ್ ನಾಯಕ ನಟನಾಗಿರುವ ಧಮ್ ಚಿತ್ರೀಕರಣದಲ್ಲೀಗ ರಕ್ಷಿತಾ ಬ್ಯುಸಿ. ಅಂದಹಾಗೆ, ಈಕೆಯ ನಿಜನಾಮ ಶ್ವೇತಾ. ತನಗೆ ರಕ್ಷಿತಾ ಎಂಬ ಒಳ್ಳೆಯ ಹೆಸರನ್ನಿಟ್ಟ ಪಾರ್ವತಮ್ಮ ಈಕೆಯ ಗಾಡ್ಮದರ್ಗಳಲ್ಲಿ ಒಬ್ಬರು. ಇನ್ನೊಬ್ಬಾಕೆ ಅಮ್ಮ ಮಮತಾ ರಾವ್!