Don't Miss!
- News Tamarind Fruit Juice: ಬಾಯಾರಿಕೆ ನೀಗಿಸಲು ಹುಣಸೆ ಹಣ್ಣಿನ ಪಾನಕ ಪರಿಚಯಿಸಿದ ಆಯುಷ್ ಇಲಾಖೆ, ಮಾಡುವುದು ಹೇಗೆ?
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಧಾರಾವಾಹಿ ಯಾವ ಟೀವಿಗೆ ಒಲಿಯುವುದೊ ?
ಇದು ಸಿಂಹಪ್ರಿಯ ವಿಷ್ಣುವರ್ಧನ್ ಅವರ ಹೊಸ ಸಿನಿಮಾದ ಹೆಸರಲ್ಲ ; ಕಿರುತೆರೆಯ ಧಾರಾವಾಹಿಯ ಹೆಸರು. ಆದರೆ, 'ಸಿಂಹ ಹೆಜ್ಜೆ"ಗೂ ವಿಷ್ಣುವರ್ಧನ್ ಅವರಿಗೂ ಸಂಬಂಧವಿದೆ. 'ಸಿಂಹ ಹೆಜ್ಜೆ" ಧಾರಾವಾಹಿಯ ಕಥೆ ವಿಷ್ಣುವರ್ಧನ್ ಅವರ ಜೀವನ ಕಥೆ! ಅರ್ಥಾತ್ ಜೀವನ ಚರಿತ್ರೆ.
'ಸಿಂಹ ಹೆಜ್ಜೆ"ಯ ಪರಿಕಲ್ಪನೆ ಹಾಗೂ ನಿರ್ದೇಶನ ಎಸ್.ಶಿವಕುಮಾರ್ ಅವರದ್ದು. ಮೋನಿಷಾ ಕ್ರಿಯೇಷನ್ಸ್ ಲಾಂಛನದಲ್ಲಿ ಶ್ರೀನಿವಾಸರಾವ್ ಶಿಂಧೆ ಹಾಗೂ ಎಸ್.ಎಂ.ಬಾಬು ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.
ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿನ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ವಿಷ್ಣು ಜೀವನ ಚರಿತ್ರೆ ಧಾರಾವಾಹಿಯ ಚಿತ್ರೀಕರಣದ ಮುಹೂರ್ತ ಇತ್ತೀಚೆಗಷ್ಟೇ ಪ್ರಾರಂಭವಾಯಿತು. ವಿಷ್ಣು ಚಡ್ಡಿ ದೋಸ್ತು ಹಾಗೂ ಮಂಡ್ಯ ಸಂಸದ ಅಂಬರೀಷ್ ಸೀರಿಯಲ್ನ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿಸಿದರು. ಐವತ್ತು ದಿನಗಳನ್ನು ಪೂರೈಸಿ ಇನ್ನೂ ಘರ್ಜಿಸುತ್ತಿರುವ 'ಸಿಂಹಾದ್ರಿಯ ಸಿಂಹ" ಚಿತ್ರದ ನಿರ್ಮಾಪಕ ಹಾಗೂ ವಿಷ್ಣು ಭಕ್ತ ಬಿ.ವಿಜಯಕುಮಾರ್ ಜ್ಯೋತಿ ಬೆಳಗಿದರು.
ಯಥಾಪ್ರಕಾರ ವಿಷ್ಣು ಗುಣಗಾನ ಮಾಡಿದ ಅಂಬರೀಷ್ ಧಾರಾವಾಹಿಗೆ ಶುಭ ಹಾರೈಸಿದರು. ವಿಷ್ಣು ಸೇನಾ ಸಮಿತಿ ಮುಖಂಡ ಪ್ರಸನ್ನಕುಮಾರ್ ಕಾರ್ಯಕ್ರಮದಲ್ಲಿ ಹಾಜರಿದ್ದರು.ಅಂದಹಾಗೆ, ವಿಷ್ಣುವರ್ಧನ್ ಅವರ ಅಪ್ಪಣೆ ಪಡೆದು ಈ ಧಾರಾವಾಹಿಯನ್ನು ನಿರ್ಮಿಸಲಾಗುತ್ತಿದೆಯಂತೆ!