Don't Miss!
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಉಪೇಂದ್ರನ ಮೇಲಿನ ಅಭಿಮಾನಕ್ಕೆ ಬಲಿಯಾದನೊಬ್ಬ ಅಭಿಮಾನಿ!
ಬೆಂಗಳೂರು: ಚಿತ್ರನಟರು ಹಾಗೂ ಅಭಿಮಾನಿಗಳ ನಂಟು ಬಹಳ ವಿಚಿತ್ರ. ಇಂತಹ ಹುಚ್ಚು ಅಭಿಮಾನವನ್ನು ಪ್ರದರ್ಶಿಸಲು ಹೋಗಿ ನಟ ಉಪೇಂದ್ರನ ಅಭಿಮಾನಿಯಾಬ್ಬ ಬಲಿಯಾಗಿದ್ದಾನೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಕೊಟ್ರೇಶ್(24)ಗೆ ಉಪೇಂದ್ರನ ಬಗ್ಗೆ ತುಂಬ ಪ್ರೀತಿ. ಹಿಂದೆ ಅನೇಕ ಸಲ ನೆಚ್ಚಿನ ನಟನನ್ನು ಭೇಟಿ ಮಾಡಿದ್ದ. ಹೊಸ ಚಿತ್ರ ಓಂಕಾರದಲ್ಲಿ ಉಪೇಂದ್ರನ ನಟನೆ ಕೊಟ್ರೇಶ್ಗೆ ಇಷ್ಟವಾಗಿದೆ. ತನ್ನ ಖುಷಿಯನ್ನು ಹಂಚಿಕೊಂಡು ಅಭಿನಂದಿಸ ಬೇಕೆಂದು ಕೊಟ್ರೇಶ್ ನಿರ್ಧರಿಸಿದ್ದಾನೆ.
ನಗರದ ಬನಶಂಕರಿ ಎರಡನೇ ಹಂತದಲ್ಲಿರುವ ಉಪೇಂದ್ರನ ಮನೆಗೆ ಭಾನುವಾರ ರಾತ್ರಿ ತೆರಳಿದಾಗ, ಉಪೇಂದ್ರ ಮನೆಯಲ್ಲಿ ಇಲ್ಲ ಎಂದು ಕಾವಲುಗಾರ ತಡೆದಿದ್ದಾನೆ. ನಿರಾಸೆಯಾದರೂ ಸಹಾ ಉಪೇಂದ್ರನನ್ನು ಕಾಣುವ ಬಯಕೆ ಕೊಟ್ರೇಶ್ನಲ್ಲಿ ಇನ್ನೂ ಹೆಚ್ಚಾಗಿದೆ.
ಉಪೇಂದ್ರನ ಮನೆಯ ಹಿಂಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಸಂಕಿರಣದಎರಡನೇ ಅಂತಸ್ತಿಗೆ ಹೋಗಿ, ತನ್ನ ನೆಚ್ಚಿನ ನಟನನ್ನು ದೂರದಿಂದ ನೋಡಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತನ ಕಾಲು ಜಾರಿ, ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ನಗರದ ಸೌತ್ ಎಂಡ್ ಸರ್ಕಲ್ ಬಳಿಯ ಪುಟ್ಪಾತ್ನಲ್ಲಿ ಬೆಲ್ಟ್ , ಪರ್ಸ್ ಮತ್ತಿತರ ವಸ್ತುಗಳ ಮಾರುತ್ತಿದ್ದ ಕೊಟ್ರೇಶ್ ಎಂಬ ಅಮಾಯಕ ಅಭಿಮಾನಕ್ಕೆ ಬಲಿಯಾಗಿದ್ದಾನೆ.(ಇನ್ಫೋ ವಾರ್ತೆ)