Don't Miss!
- News Lok Sabha Election 2024: ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗದ ವಿಭಿನ್ನ ಪ್ರಯತ್ನ
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಯಿನೆರಳು, ಆದಿನಗಳು ದೆಹಲಿಯಲ್ಲಿ ಪ್ರದರ್ಶನ
ನವದೆಹಲಿ, ಸೆ. 27: ಕರ್ನಾಟಕ ರಾಜ್ಯ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ದೆಹಲಿ ಕರ್ನಾಟಕ ಭವನದ ಜಂಟಿ ಆಯೋಜನೆಯಲ್ಲಿ ಕನ್ನಡ ಚಲನಚಿತ್ರಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ಅವರ ಕಥೆ ಆಧರಿಸಿದ, ಚೈತನ್ಯ ನಿರ್ದೇಶನದ 'ಆದಿನಗಳು 'ಚಿತ್ರ ಹಾಗೂ ಗಿರೀಶ್ ಕಾಸರವಳ್ಳಿ ನಿರ್ದೇಶನದ ಪವಿತ್ರಾ ಲೋಕೇಶ್ ಅಭಿನಯಿಸಿರುವ 'ನಾಯಿನೆರಳು' ಪ್ರಶಸ್ತಿ ವಿಜೇತ ಚಿತ್ರಗಳು ಸೆ. 28 ರಂದು ದೆಹಲಿ ಕರ್ನಾಟಕ ಭವನದಲ್ಲಿ ಪ್ರದರ್ಶನಗೊಳ್ಳಲಿವೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಓಶಿಯಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಸರವಳ್ಳಿ ಅವರ ಗುಲಾಬಿ ಟಾಕೀಸ್ ಪ್ರದರ್ಶನಗೊಂಡು, ತೀರ್ಪುಗಾರರ ಹಾಗೂ ಪ್ರೇಕ್ಷಕರ ಮನ್ನಣೆ ಗಳಿಸಿತ್ತು. ಯುವ ನಿರ್ದೇಶಕ ಅಭಯಸಿಂಹ ನಿರ್ದೇಶನದ ಪ್ರಥಮ ಚಿತ್ರ ಗುಬ್ಬಚ್ಚಿಗಳು ಕೂಡ ದೆಹಲಿಯಲ್ಲೇ ಮೊದಲ ಪ್ರದರ್ಶನ ಕಂಡಿದ್ದು. ಈಗ ಗುಬ್ಬಚ್ಚಿಗಳು ನ್ಯೂಯಾರ್ಕ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಪ್ರದರ್ಶನ ಕಂಡಿದೆ. ಈ ರೀತಿಯ ಸದಭಿರುಚಿ ಚಿತ್ರಗಳು ದೆಹಲಿಯಲ್ಲೇ ಮೊದಲ ಪ್ರದರ್ಶನಗೊಂಡು ನಂತರ ಕರ್ನಾಟಕಕ್ಕೆ ಕಾಲಿಡುತ್ತಿರುವುದು ಇತ್ತೀಚಿನ ಬೆಳವಣಿಗೆ.
ದಿನಾಂಕ: 28/09/08
ಚಿತ್ರ:
ಆ
ದಿನಗಳು
ಸಮಯ:
3.30
ಚಿತ್ರ:
ನಾಯಿನೆರಳು
ಸಮಯ:
ಸಂಜೆ
6.30
ಸ್ಥಳ:
ದೆಹಲಿ
ಕರ್ನಾಟಕ
ಭವನ
ಸೆ.
12.
ರಾವ್
ತುಲಾರಂ
ಮಾರ್ಗ್
ನವದೆಹಲಿ-110022
ಹೆಚ್ಚಿನವಿವರಗಳಿಗೆ
ಸಂಪರ್ಕಿಸಿ:
ಉಪ
ನಿರ್ದೇಶಕರು,
ಕರ್ನಾಟಕ
ವಾರ್ತಾ
ಇಲಾಖೆ
.
ಸಂಚಾರವಾಣಿ:99686
52139
(ದಟ್ಸ್ ಕನ್ನಡ ಸಭೆ ಸಮಾರಂಭ)