Don't Miss!
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- News ಬಿಸಿಲಿನ ಶಾಖಕ್ಕೆ ಬೇಸತ್ತು ಎಸಿ ಹೆಲ್ಮೆಟ್ ಮೊರೆಹೋದ ಟ್ರಾಫಿಕ್ ಪೊಲೀಸರು-ಎಲ್ಲಿ?
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿರುವ ಸವಾಲುಗಳು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿರುವ ಸವಾಲುಗಳು ಹಲವು. ಫ್ಯಾಮಿಲಿ, ಫ್ಯಾನ್ಸ್, ಪರ್ಫಾಮೆನ್ಸ್. ದರ್ಶನ್ ಮುಂದಿನ ಯೋಜನೆಗಳ ಬಗ್ಗೆ ಸಿಕ್ಕಿರುವ ಮಾಹಿತಿ ಇಷ್ಟು...
ದರ್ಶನ್ ಸಂತಸ ಯಾತ್ರೆ: ವಾರಾಂತ್ಯಕ್ಕೆ ಹುಬ್ಬಳ್ಳಿಗೆ ತೆರಳಲಿರುವ ದರ್ಶನ್ ಡಾ.ರಾಜ್ ಕಪ್ ಆಡುವ ಸಾಧ್ಯತೆಯಿದೆ. ನ.1 ಮತ್ತೊಂದು ಕಾರ್ಯಕ್ರಮ ಇರುವುದರಿಂದ ದರ್ಶನ್ ಮೈದಾನಕ್ಕೆ ಇಳಿಯದೆ ಎಲ್ಲಾ ಕ್ರಿಕೆಟ್ ತಂಡಗಳನ್ನು ಬೆಂಬಲಿಸುತ್ತಾ ಪೆವಿಲಿಯನ್ ನಲ್ಲೇ ಕೂತರೂ ಆಚ್ಚರಿಯೇನಿಲ್ಲ.
ಫ್ಯಾಮಿಲಿ ಜೊತೆ ಟೈಮ್: ಕುಟುಂಬ ಸಮೇತ ಧಾರ್ಮಿಕ ಕ್ಷೇತ್ರಗಳನ್ನು ಸುತ್ತಿ ಬಂದರೂ ಮನೆ ಮಂದಿಯೊಂದಿಗೆ ಏಕಾಂತ ಲಭಿಸಿರಲಿಲ್ಲ. ತಿರುಪತಿ ಹರಕೆ ಮುಡಿ ಕೊಟ್ಟು ಬರುವ ಯೋಜನೆಯೂ ಇದೆಯಂತೆ.
ಶೂಟಿಂಗ್ ಯಾವಾಗ?: ಚಿಂಗಾರಿ ಚಿತ್ರದ ಡಬ್ಬಿಂಗ್ ಕಾರ್ಯ, ಸ್ವಲ್ಪ ಶೂಟಿಂಗ್ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಶೂಟಿಂಗ್ ಆರಂಭವನ್ನು ಮುಂದಿನ ತಿಂಗಳ ಅಂತ್ಯಕ್ಕೆ ಮುಂದೂಡಲಾಗಿದೆ.
ಡಿ.1ರಿಂದ ನಾಗಣ್ಣ ನಿರ್ದೇಶನದ ಐತಿಹಾಸಿಕ ಚಿತ್ರ ಸಂಗೊಳ್ಳಿ ರಾಯಣ್ಣ ಚಿತ್ರೀಕರಣ ಮತ್ತೆ ಆರಂಭವಾಗುವ ಸೂಚನೆಗಳಿವೆ.
ನಟಿ ನಿಖಿತಾ ಜೊತೆ ಒಂದು ಸಾಂಗ್ ಸೇರಿದಂತೆ 35 ದಿನಗಳ ಶೂಟಿಂಗ್ ಬಾಕಿಯಿದೆ, ಬೆಳಗಾವಿಯಲ್ಲೇ ಹೆಚ್ಚಿನ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ ಎಂದು ನಿರ್ದೇಶಕ ನಾಗಣ್ಣ ಹೇಳಿದ್ದಾರೆ.
ಜನವರಿ 2012ರ ನಂತರ 'ವಿರಾಟ್', ದಿನಕರ್ ತೂಗುದೀಪ ನಿರ್ದೇಶನದ 'ಬುಲ್ ಬುಲ್' ಚಿತ್ರಗಳು ಸೆಟ್ಟೇರಲಿದೆ. ಮಹೇಶ್ ಸುಖಧರೆ ಕೂಡಾ ದರ್ಶನ್ ಕಾಲ್ ಶೀಟ್ ಕೇಳಿದ್ದಾರೆ. ಒಟ್ಟಿನಲ್ಲಿ ದರ್ಶನ್ ಗೆ ಈ ದೀಪಾವಳಿ ಹೊಸ ಬೆಳಕನ್ನು ಹೊತ್ತು ತಂದಿದೆ.