ಸುರೇಶ್ ಅವರನ್ನು ಅಂಬರಕ್ಕೇರಿಸಿದ ಸ್ಲಂ ಬಾಲ

ಅವಕಾಶಗಳ ಹೆಚ್ಚಳದಿಂದ ಸುರೇಶ್ ಉಬ್ಬಿಹೋಗಿಲ್ಲ. ಬಂದ ಅವಕಾಶಗಳನ್ನು ಬಾಚಿಕೊಳ್ಳುವ ಅವಕಾಶವಾದಿ ಉತ್ಸಾಹವೂ ಅವರಲ್ಲಿಲ್ಲ. ಅವರದು ಆತ್ಮಾವಲೋಕನದ ಮನಸ್ಸು. ಊರೆಲ್ಲ ಭಲೇ ಭಲೇ ಎನ್ನುತ್ತಿದ್ದರೂ, 'ಸ್ಲಂ ಬಾಲ"ದಲ್ಲಿನ ನಿರ್ವಹಣೆ ಅವರಿಗೆ ಅಂಥ ತೃಪ್ತಿಯೇನೂ ತಂದಿಲ್ಲ. ಇನ್ನೂ ಚೆನ್ನಾಗಿ ಅಭಿನಯಿಸಬೇಕಿತ್ತು ಎನ್ನುವುದವರ ಅನಿಸಿಕೆ. ಪಾತ್ರದ ಮೇಲೆ ತಮ್ಮ ರಂಗಭೂಮಿಯ ನೆರಳು ಬಿದ್ದಿದೆ, ತಮ್ಮ ಪಾತ್ರ ನಿರ್ವಹಣೆಯಲ್ಲಿ ವಿಪರೀತ ನಾಟಕೀಯತೆಯಿದೆ ಎಂದೂ ಅವರಿಗೆ ಅನ್ನಿಸಿದ್ದಿದೆ.
ಹಾಂ, ಸುರೇಶ್ ಸದ್ಯಕ್ಕೆ ಒಪ್ಪಿಕೊಂಡಿರುವ ಚಿತ್ರ 'ಮುರಾರಿ". ವಾಸು ನಿರ್ದೇಶನದ ಈ ಚಿತ್ರದ ನಾಯಕ ಶ್ರೀಮುರಳಿ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications