Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉದಯೋನ್ಮುಖ ನಟ ವಿಮಾನ ಅಪಘಾತದಿಂದ ಬಚಾವ್
ಇತ್ತೀಚೆಗಷ್ಟೇ ಗಾಂಧಿನಗರಕ್ಕೆ ಅಡಿಯಿಟ್ಟಿದ್ದ ತೆಲುಗು, ತಮಿಳು ಚಿತ್ರಗಳ ನಟ ನವದೀಪ್ ವಿಮಾನ ಅಪಘಾತದಿಂದ ಬಚಾವ್ ಆಗಿದ್ದಾರೆ. ಸೆ.25ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ 19 ಮಂದಿ ಮೃತಪಟ್ಟಿದ್ದರು. ಆದರೆ ಈ ವಿಮಾನದಲ್ಲಿ ನವದೀಪ್ ಕೂಡ ಇದ್ದರು ಎಂಬ ಸಂಗತಿ ತಡವಾಗಿ ಗೊತ್ತಾಗಿದೆ.
ನೇಪಾಳದ ಬುದ್ಧ ಏರ್ ವಿಮಾನ ಭಾನುವಾರ ಬೆಳಗ್ಗೆ 7.31ಕ್ಕೆ ಅಪಘಾತಕ್ಕೆ ಈಡಾಗಿ 19 ಮಂದಿಯನ್ನು ಬಲಿತೆಗೆದುಕೊಂಡಿತ್ತು. ತ್ರಿಭುವನ್ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನದ ಸಿಗ್ನಲ್ 7.30ಕ್ಕೆ ಕಟ್ಟಾಗಿತ್ತು. ಬಳಿಕ 7.31ಕ್ಕೆಲ್ಲಾ ವಿಮಾನ ಅಪಘಾತಕ್ಕೀಡಾಗಿತ್ತು. 10 ಮಂದಿ ಭಾರತೀಯರು 9 ವಿದೇಶಿಯರು ಅಸುನೀಗಿದ್ದರು.
ಇದೇ ವಿಮಾನದಲ್ಲಿ ನವದೀಪ್ ಪ್ರಯಾಣಿಸಬೇಕಾಗಿತ್ತು. ಇದಕ್ಕಾಗಿ ಟಿಕೆಟ್ ಬುಕ್ ಮಾಡಲು ಏಜೆಂಟ್ಗೆ ಕರೆ ಮಾಡಿದ್ದರು. ಆದರೆ ಅದೃಷ್ಟ ನೋಡಿ ಹೇಗಿತ್ತು. ಏಜೆಂಟ್ ಈತನ ಕರೆಯನ್ನು ಸ್ವೀಕರಿಸಿಲ್ಲ. ಬಳಿಕ ಹೇಗೋ ಕಠ್ಮಂಡು ತಲುಪಿದ್ದ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಶಾಕ್ ಆಗಿದ್ದಾನೆ. ಬದುಕಿದೆಯಾ ಬಡಜೀವವೇ ಎಂದು ಸಮಾಧಾನ ಪಟ್ಟಿದ್ದಾನೆ. (ಏಜೆನ್ಸೀಸ್)