twitter
    For Quick Alerts
    ALLOW NOTIFICATIONS  
    For Daily Alerts

    ಉದಯೋನ್ಮುಖ ನಟ ವಿಮಾನ ಅಪಘಾತದಿಂದ ಬಚಾವ್

    By Rajendra
    |

    ಇತ್ತೀಚೆಗಷ್ಟೇ ಗಾಂಧಿನಗರಕ್ಕೆ ಅಡಿಯಿಟ್ಟಿದ್ದ ತೆಲುಗು, ತಮಿಳು ಚಿತ್ರಗಳ ನಟ ನವದೀಪ್ ವಿಮಾನ ಅಪಘಾತದಿಂದ ಬಚಾವ್ ಆಗಿದ್ದಾರೆ. ಸೆ.25ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ 19 ಮಂದಿ ಮೃತಪಟ್ಟಿದ್ದರು. ಆದರೆ ಈ ವಿಮಾನದಲ್ಲಿ ನವದೀಪ್ ಕೂಡ ಇದ್ದರು ಎಂಬ ಸಂಗತಿ ತಡವಾಗಿ ಗೊತ್ತಾಗಿದೆ.

    ನೇಪಾಳದ ಬುದ್ಧ ಏರ್ ವಿಮಾನ ಭಾನುವಾರ ಬೆಳಗ್ಗೆ 7.31ಕ್ಕೆ ಅಪಘಾತಕ್ಕೆ ಈಡಾಗಿ 19 ಮಂದಿಯನ್ನು ಬಲಿತೆಗೆದುಕೊಂಡಿತ್ತು. ತ್ರಿಭುವನ್ ಇಂಟರ್‌ನ್ಯಾಷನಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನದ ಸಿಗ್ನಲ್ 7.30ಕ್ಕೆ ಕಟ್ಟಾಗಿತ್ತು. ಬಳಿಕ 7.31ಕ್ಕೆಲ್ಲಾ ವಿಮಾನ ಅಪಘಾತಕ್ಕೀಡಾಗಿತ್ತು. 10 ಮಂದಿ ಭಾರತೀಯರು 9 ವಿದೇಶಿಯರು ಅಸುನೀಗಿದ್ದರು.

    ಇದೇ ವಿಮಾನದಲ್ಲಿ ನವದೀಪ್ ಪ್ರಯಾಣಿಸಬೇಕಾಗಿತ್ತು. ಇದಕ್ಕಾಗಿ ಟಿಕೆಟ್ ಬುಕ್ ಮಾಡಲು ಏಜೆಂಟ್‌ಗೆ ಕರೆ ಮಾಡಿದ್ದರು. ಆದರೆ ಅದೃಷ್ಟ ನೋಡಿ ಹೇಗಿತ್ತು. ಏಜೆಂಟ್ ಈತನ ಕರೆಯನ್ನು ಸ್ವೀಕರಿಸಿಲ್ಲ. ಬಳಿಕ ಹೇಗೋ ಕಠ್ಮಂಡು ತಲುಪಿದ್ದ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಶಾಕ್ ಆಗಿದ್ದಾನೆ. ಬದುಕಿದೆಯಾ ಬಡಜೀವವೇ ಎಂದು ಸಮಾಧಾನ ಪಟ್ಟಿದ್ದಾನೆ. (ಏಜೆನ್ಸೀಸ್)

    English summary
    South Indian actor Navdeep just escaped a plane crash which claimed over 19 lives on Sunday (September 25th, 2011) morning in Khatmandu, Nepal. He was suppose to board the same flight and tried booking through his agent.
    Tuesday, September 27, 2011, 15:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X