Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾಯ್ತನದ ಖುಷಿಯಲ್ಲಿ ಬೆಂಗಳೂರು ಬೆಡಗಿ ಸಿಂಧು ಮೆನನ್
'ರಶ್ಮಿ' (1994)ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಸಿಂಧು ಮೆನನ್ ಈಗ ಮುದ್ದಾದ ಹೆಣ್ಣುಮಗುವಿಗೆ ತಾಯಿಯಾಗಿದ್ದಾರೆ. ಇಸವಿ 2010ರಲ್ಲಿ ಬ್ರಿಟನ್ ಉದ್ಯಮಿ ಪ್ರಭು ಅವರ ಕೈಹಿಡಿದಿದ್ದರು ಸಿಂಧು. ಮಲಯಾಳಂ ಮೂಲದ ಈ ಬೆಡಗಿ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಹಾಗಾಗಿ ಈಕೆಗೆ ಕನ್ನಡ ಸುಲಿದ ಬಾಳೆಹಣ್ಣಿನಂತೆ.
ಪ್ರಭು ಅವರನ್ನು ವರಿಸಿದ ಬಳಿಕ ಸಿಂಧು ಬ್ರಿಟನ್ಗೆ ಹಾರಿದ್ದರು. ಅಲ್ಲಿಯೇ ಪತಿಯೊಂದಿಗೆ ಸಂಸಾರ ತೂಗುತ್ತಿದ್ದರು. ಈಗ ಬ್ರಿಟನ್ನಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಭರತನಾಟ್ಯ ಪ್ರವೀಣೆಯಾಗಿದ್ದ ಸಿಂಧು ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ಕೆ ವಿ ಜಯರಾಮ್. 'ಪ್ರೇಮ ಪ್ರೇಮ ಪ್ರೇಮ' (1999)ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಸಿಂಧು ಚಿತ್ರರಂಗಕ್ಕೆ ಪರಿಚಯವಾಗಿದ್ದರು.
ಬಳಿಕ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಸಿಂಧು ಮಿಂಚತೊಡಗಿದರು. ಸುದೀಪ್ ಅಭಿನಯದ 'ನಂದಿ' ಚಿತ್ರದ ಮೂಲಕ ಮತ್ತೆ ಸಿಂಧು ಕನ್ನಡಕ್ಕೆ ಆಗಮಿಸಿದರು. ಯಾರೇ ನೀ ಹುಡುಗಿ, ಜೇಷ್ಠ, ಧರ್ಮ, ಖುಷಿ ಮುಂತಾದ ಕನ್ನಡ ಚಿತ್ರಗಳಲ್ಲಿ ಸಿಂಧು ಅಭಿನಯಿಸಿದರೂ ಆಕೆಯ ವೃತ್ತಿಜೀವನ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ. ಅದು ಏನೇ ಇರಲಿ ಸಿಂಧು ಅವರಿಗೆ ಒಳ್ಳೆಯದಾಗಲಿ ಎಂದು ಆಶಿಸೋಣ.