Don't Miss!
- News ಚುನಾವಣೆ ಹೊತ್ತಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಕೋರ್ಟ್ ಸಮನ್ಸ್: ಯಾಕೆ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಂಬೋಡಿಯಾದಲ್ಲಿ 'ಅಪ್ಪು ಪಪ್ಪು' ಪ್ರಾರಂಭ
ಸೌಂದರ್ಯ ಜಗದೀಶ್ ಆರ್. ಅನಂತರಾಜು ಸಂಗಮದಲ್ಲಿ ಈಗಾಗಲೇ "ಮಸ್ತ್ ಮಜಾಮಾಡಿ" ಎಂಬ ಯಶಸ್ವೀ ಚಿತ್ರ ಹೊರ ಬಂದಿದ್ದು ನೆನಪಿರಬೇಕು. ಇದೇ ಜೋಡಿ ಈಗ "ಅಪ್ಪು-ಪಪ್ಪು" ಎಂಬ ಮತ್ತೊಂದು ಬಿಗ್ ಚಿತ್ರ ನಿರ್ಮಾಣಕ್ಕೆ ಕೈಹಾಕಿದೆ. ಹಾಲಿವುಡ್ನಲ್ಲಿ ಚಿಂಪಾಂಜಿಯ ಸಾಹಸದ ಚಿತ್ರಗಳು ಬಂದಿದ್ದರು ಭಾರತದಲ್ಲಿ ಯಾರೂ ಅಂಥಾ ಪ್ರಯತ್ನ ಮಾಡಿಲ್ಲ. ನಿರ್ಮಾಪಕ ಸೌಂದರ್ಯ ಜಗದೀಶ್ ಆ ಸಾಹಸ ಮಾಡುತ್ತಿದ್ದಾರೆ.
ಚಿತ್ರದ ಟೈಟಲ್ ಹೇಳುವ ಹಾಗೆ ಇದು ಒಬ್ಬ ಬಾಲಕ ಹಾಗೂ ಪ್ರಾಣಿಯೊಂದರ ಕಥೆ. ಜಗದೀಶರ ಪುತ್ರ ಲಿಟಲ್ ಸ್ಟಾರ್ ಸ್ನೇಹಿತನ ಜೊತೆ "ವಾರಂಗಟಾನ" ಹೆಸರಿನ ಚಿಂಪಾಂಜಿಯೂ ನಟಿಸುತ್ತಿದೆ. ಕಳೆದ ಸೆಪ್ಟೆಂಬರ್ನಲ್ಲೇ ಈ ಚಿತ್ರದ ಚಿತ್ರೀಕರಣ ಆರಂಭವಾಗಬೇಕಾಗಿತ್ತು. ಇಂಡೋನೇಷಿಯಾ, ಮಲೇಷಿಯಾ ಥೈಲ್ಯಾಂಡ್, ಬ್ಯಾಂಕಾಕ್ ಸೇರಿದಂತೆ ಮೊದಲಾದ ಕಡೆ ಈ ಚಿಂಪಾಂಜಿಯನ್ನು ಹುಡುಕುವಲ್ಲಿ ಸಮಯ ಕಳೆದು ಕೊನೆಗೆ ಈ "ವಾರಂಗಟನ್" ಸಿಕ್ಕ ಮೇಲೆ ಕಳೆದ 19 ರಂದು ಕಾಂಬೋಡಿಯಾದಲ್ಲಿ ಚಿತ್ರೀಕರಣ ಪ್ರಾರಂಭಿಸಲಾಯಿತು.
ಒಂದೇ ಹಂತದಲ್ಲಿ 65 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು 25 ದಿನ ಕಾಂಬೋಡಿಯಾದಲ್ಲಿ ನಂತರ ಬೇರೆ ಬೇರೆ ಸ್ಥಳಗಳಲ್ಲಿ ಚಿತ್ರೀಕರಿಸಲಿದ್ದಾರೆ. ಈ ಚಿಂಪಾಂಜಿಗೆ 50 ದಿನಗಳ ಕಾಲ ತರಬೇತಿ ನೀಡಲಾಗಿದೆ. ಅಲ್ಲದೆ ಈ ಪ್ರಾಣಿಯನ್ನು ಬಳಸಿಕೊಳ್ಳಲು ಅನುಮತಿ ಸಿಗುವುದೂ ಸ್ವಲ್ಪ ತಡವಾಯ್ತು. ಪುಟ್ಟ ಬಾಲಕ ಹಾಗೂ ಚಿಂಪಾಂಜಿಯ ನಡುವಿನ ಮುಗ್ಧ ಪ್ರೀತಿ ಹಾಗೂ ಚಿಂಪಾಂಜಿಯ ಸಾಹಸದ ಕಥೆ ಹೊಂದಿರುವ ಈ ಚಿತ್ರ ಕನ್ನಡಕ್ಕೊಂದು ದಾಖಲೆಯಾಗಲಿದೆ. ಸೌಂದರ್ಯ ಜಗದೀಶ್ ಫಿಲಂಸ್ ಲಾಂಛನದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ನಿರ್ಮಾಪಕ ಜಗದೀಶರ ಸಾಹಸಕ್ಕೆ ಸೈ ಎನ್ನಲೇಬೇಕು.
ವಿಜಯಕಿರಣ್ ಕಾರ್ಯಕಾರಿ ನಿರ್ಮಾಪಕರಾಗಿದ್ದು ಜಗದೀಶ್ ಫಿಲಂಸ್ನ ಕಥೆ, ಕೃಷ್ಣರ ಛಾಯಾಗ್ರಹಣ, ಹಂಸಲೇಖರ ಸಾಹಿತ್ಯ, ಸಂಗೀತ, ರಾಂನಾರಾಯಣರ ಸಂಭಾಷಣೆ, ಪಳನಿರಾಜ್ರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವವರು ಆರ್.ಅನಂತರಾಜು, ಅಬ್ಬಾಸ್, ರೇಖಾ ರಂಗಾಯಣ ರಘು, ಕೋಮಲ್ ಮೊದಲಾದವರ ತಾರಾಣವಿದೆ.