Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ಯದಾದ್ಯಂತ ಪಂತುಲು ಚಲನ ಚಿತ್ರೋತ್ಸವ
ಪಂತುಲು ಜನ್ಮಶತಮಾನೋತ್ಸವ ಅಂಗವಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ(ಕೆಸಿಎ) ರಾಜ್ಯದಾದ್ಯಂತ ಬಿ ಆರ್ ಪಂತುಲು ಚಿತ್ರೋತ್ಸವನ್ನು ಆಚರಿಸಲು ಮುಂದಾಗಿದೆ ಎಂದು ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ ಹೌಸ್ ನಲ್ಲಿ ಕೆಸಿಎ ಅಧ್ಯಕ್ಷ ಟಿ ಎಸ್ ನಾಗಾಭರಣ ತಿಳಿಸಿದರು.
ಪಂತುಲು ನಿರ್ದೇಶನದ 19 ಚಿತ್ರಗಳ ಪ್ರದರ್ಶನ, ವಿಚಾರ ಸಂಕಿರಣ ಹಾಗೂ ಅವರ ಕುರಿತ ಪುಸ್ತಕವನ್ನು ಹೊರತರಲಾಗುತ್ತದೆ ಎಂದು ನಾಗಾಭರಣ ತಿಳಿಸಿದರು. ಇದಕ್ಕಾಗಿ ರು.25 ಲಕ್ಷಗಳನ್ನು ಚಲನಚಿತ್ರ ಅಕಾಡೆಮಿ ವೆಚ್ಚ ಮಾಡಲಿದೆ ಎಂದರು. ಇದೇ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮೊದಲ ವಾರ್ಷಿಕೋತ್ಸ್ಸವನ್ನು ಆಚರಿಸಲಾಯಿತು.
ಬಿ ಆರ್ ಪಂತುಲು ನಿರ್ದೇಶನದ ಮಹತ್ವದ ಚಿತ್ರಗಳಲ್ಲಿ 'ಶ್ರೀ ಕೃಷ್ಣದೇವರಾಯ' ಸಹ ಒಂದು. ಈ ಚಿತ್ರದ ಸ್ಕ್ರಿಪ್ಟನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಪಂತುಲು ಅವರ ಪುತ್ರಿ ಬಿ ಆರ್ ವಿಜಯಲಕ್ಷ್ಮಿ ಹಸ್ತಾಂತರಿಸಿದರು. ಪಂತುಲು ಅವರ ಅದ್ಭುತ ಪ್ರತಿಭೆಯನ್ನು ಖ್ಯಾತ ಅಭಿನೇತ್ರಿ ಡಾ.ಬಿ ಸರೋಜಾ ದೇವಿ ನೆನೆದರು.
ಸರೋಜಾ ದೇವಿ ಅವರು ಮಾತನಾಡುತ್ತಾ, ಪಂತುಲು ಅವರ ಜೊತೆ ಕೆಲಸ ಮಾಡಿದ ಮಹನೀಯರನ್ನು ಸಂದರ್ಶಿಸುವ ಕಾರ್ಯಕ್ರಮವನ್ನು ದೂರದರ್ಶನ ವಾಹಿನಿ ಮಾಡಲಿ. ಪ್ರತಿ ದಿನ ಅರ್ಧ ಗಂಟೆ ಆ ಕಾರ್ಯಕ್ರಮವನ್ನು ಪ್ರಸಾರ ಮಾಡಲಿ ಎಂದು ಸಲಹೆ ನೀಡಿದರು. ಪಂತುಲು ಅವರ ಚಿತ್ರಗಳನ್ನು ಅಧ್ಯಯನ ಮಾಡಬೇಕಾದ ಅವಶ್ಯಕತೆ ಇದೆ. ಪಂತುಲು ಚಿತ್ರಗಳಿಂದ ಇಂದಿನ ಪೀಳಿಗೆ ಕಲಿಯುವುದು ಬಹಳಷ್ಟಿದೆ ಎಂದರು.