Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಂಧ್ರಕ್ಕೆ ಜಿಗಿದ ಚೆಲುವಿನ ಚಿಲಿಪಿಲಿ ಚಿಗರೆ ರೂಪಿಕಾ
'ಚೆಲುವಿನ ಚಿಲಿಪಿಲಿ' ಮೂಲಕ ಕನ್ನಡಕ್ಕೆ ಕಾಲಿಟ್ಟ ರೂಪಿಕಾ, ಈಗ ತೆಲುಗಿನ ಚಿತ್ರವೊಂದರಲ್ಲಿ ಆಫರ್ ಗಿಟ್ಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ರೂಪಿಕಾ ಟಾಲಿವುಡ್ಗೆ ಜಿಗಿಯುವುದು ಬಹುತೇಕ ಖಚಿತವಾಗಿದೆ. ಕಾಲ್ಗೆಜ್ಜೆ, ತೀರ್ಥರೂಪ, ಮಾಯದಂಥ ಮಳೆ ಮುಂತಾದವು ರೂಪಿಕಾ ಅಭಿನಯದ ಕನ್ನಡ ಚಿತ್ರಗಳು.
ನಿರ್ದೇಶಕ ಸಿದ್ದಲಿಂಗಯ್ಯ ಶೋಧಿಸಿದ ಪ್ರತಿಭೆ ಚರಣ್ ರಾಜ್ ಗೊತ್ತಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲೆಲ್ಲ ಅಭಿನಯಿಸಿ ಸೈ ಅನ್ನಿಸಿಕೊಂಡಿರುವ ಚರಣ್ ರಾಜ್ ಈಗ ತಾವೇ ಒಂದು ತೆಲುಗು ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನೈಜ ಘಟನೆಯೊಂದನ್ನ ಆಧರಿಸಿ ಸಿದ್ಧವಾಗುತ್ತಿರುವ ಈ ಸಿನಿಮಾದ ಹೆಸರು 'ನಾಗರಾಜ ಅನಿತಾ ಯಥಾರ್ಥ ಪ್ರೇಮಕಥ'. ಅವರ ಈ ಚಿತ್ರಕ್ಕೇ ರೂಪಿಕಾ ನಾಯಕಿಯಾಗಿ ಗೊತ್ತಾಗಿದ್ದಾರೆ. ಈ ಚಿತ್ರದ ಹೀರೋ ಅಮರ್.
ಮಾತುಕಥೆ ಹಂತದಲ್ಲಿರುವ ಈ ಸಿನಿಮಾ ಓಕೆ ಆದರೆ ಈ ಚಿತ್ರದ ಮೂಲಕ ಕನ್ನಡತಿ ರೂಪಿಕಾ ಕೂಡಾ ತೆಲುಗು ಭಾಷೆಯಲ್ಲಿ ನಟಿಸಿದ ಗರಿಮೆ ಹೊಂದಲಿದ್ದಾರೆ. ಇದೇ ಚಿತ್ರ ಆಕೆಯ ಟಾಲಿವುಡ್ ಭವಿಷ್ಯಕ್ಕೂ ದೊಡ್ಡ ಮೆಟ್ಟಿಲಾಗಬಹುದು. ಹೇಳುವಂತಿಲ್ಲ. (ಒನ್ಇಂಡಿಯಾ ಕನ್ನಡ)