Don't Miss!
- News Karnataka Lok Sabha Election 2024: ಏ.26ಕ್ಕೆ ಕರ್ನಾಟಕ ಮೊದಲ ಹಂತದ ಮತದಾನ: 14 ಕ್ಷೇತ್ರ, ಅಭ್ಯರ್ಥಿ, ಪೈಪೋಟಿ ಬಗ್ಗೆ ಮಾಹಿತಿ
- Lifestyle ಐಸ್ ಟೀ ಮಾಡುವುದು ಹೇಗೆ? ಇಲ್ಲಿದೆ ಪರ್ಫೆಕ್ಟ್ ಐಸ್ ಟೀ ರೆಸಿಪಿ
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಂಧ್ರಕ್ಕೆ ಜಿಗಿದ ಚೆಲುವಿನ ಚಿಲಿಪಿಲಿ ಚಿಗರೆ ರೂಪಿಕಾ
'ಚೆಲುವಿನ ಚಿಲಿಪಿಲಿ' ಮೂಲಕ ಕನ್ನಡಕ್ಕೆ ಕಾಲಿಟ್ಟ ರೂಪಿಕಾ, ಈಗ ತೆಲುಗಿನ ಚಿತ್ರವೊಂದರಲ್ಲಿ ಆಫರ್ ಗಿಟ್ಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ರೂಪಿಕಾ ಟಾಲಿವುಡ್ಗೆ ಜಿಗಿಯುವುದು ಬಹುತೇಕ ಖಚಿತವಾಗಿದೆ. ಕಾಲ್ಗೆಜ್ಜೆ, ತೀರ್ಥರೂಪ, ಮಾಯದಂಥ ಮಳೆ ಮುಂತಾದವು ರೂಪಿಕಾ ಅಭಿನಯದ ಕನ್ನಡ ಚಿತ್ರಗಳು.
ನಿರ್ದೇಶಕ ಸಿದ್ದಲಿಂಗಯ್ಯ ಶೋಧಿಸಿದ ಪ್ರತಿಭೆ ಚರಣ್ ರಾಜ್ ಗೊತ್ತಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲೆಲ್ಲ ಅಭಿನಯಿಸಿ ಸೈ ಅನ್ನಿಸಿಕೊಂಡಿರುವ ಚರಣ್ ರಾಜ್ ಈಗ ತಾವೇ ಒಂದು ತೆಲುಗು ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನೈಜ ಘಟನೆಯೊಂದನ್ನ ಆಧರಿಸಿ ಸಿದ್ಧವಾಗುತ್ತಿರುವ ಈ ಸಿನಿಮಾದ ಹೆಸರು 'ನಾಗರಾಜ ಅನಿತಾ ಯಥಾರ್ಥ ಪ್ರೇಮಕಥ'. ಅವರ ಈ ಚಿತ್ರಕ್ಕೇ ರೂಪಿಕಾ ನಾಯಕಿಯಾಗಿ ಗೊತ್ತಾಗಿದ್ದಾರೆ. ಈ ಚಿತ್ರದ ಹೀರೋ ಅಮರ್.
ಮಾತುಕಥೆ ಹಂತದಲ್ಲಿರುವ ಈ ಸಿನಿಮಾ ಓಕೆ ಆದರೆ ಈ ಚಿತ್ರದ ಮೂಲಕ ಕನ್ನಡತಿ ರೂಪಿಕಾ ಕೂಡಾ ತೆಲುಗು ಭಾಷೆಯಲ್ಲಿ ನಟಿಸಿದ ಗರಿಮೆ ಹೊಂದಲಿದ್ದಾರೆ. ಇದೇ ಚಿತ್ರ ಆಕೆಯ ಟಾಲಿವುಡ್ ಭವಿಷ್ಯಕ್ಕೂ ದೊಡ್ಡ ಮೆಟ್ಟಿಲಾಗಬಹುದು. ಹೇಳುವಂತಿಲ್ಲ. (ಒನ್ಇಂಡಿಯಾ ಕನ್ನಡ)