Don't Miss!
- News ಬೆಂಗಳೂರಿನಲ್ಲಿ 647 ಎಕರೆಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಕೆಐಎಡಿಬಿ ಯೋಜನೆ
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅರವಿಂದ'ನ ನಾಯಕಿಯಾಗಿ ಧಾರವಾಡದ ಐಶ್ವರ್ಯ!
ಬೆನಕ ಮೂವೀಸ್ ನಿರ್ಮಾಣದ 'ಅರವಿಂದ' ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡುಗಳ ಚಿತ್ರೀಕರಣ ಆಗಸ್ಟ್ ಮೊದಲವಾರದಲ್ಲಿ ಆರಂಭವಾಗಲಿದೆ. ಚಿತ್ರದ ಗೀತೆಗಳು ಕುಲು ಮನಾಲಿ ಹಾಗೂ ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಳಲಿದೆ ಎಂದು ನಿರ್ಮಾಪಕ ರವಿಕುಮಾರ್ ತಿಳಿಸಿದ್ದಾರೆ.
ಚಿತ್ರದಲ್ಲಿ ನಟಿಸುವ ಕಲಾವಿದರು ಕನ್ನಡದವರೇ ಆಗಿರಬೇಕು ಎಂಬ ಅಭಿಲಾಷೆ ಹೊತ್ತ ನಿರ್ಮಾಪಕರು ಅಭಿನಯ ತರಂಗದಿಂದ ತರಬೇತಿ ಪಡೆದಿರುವ ಅರವಿಂದ ರಾಜ್ ಎಂಬ ಹುಡುಗನನ್ನು ಚಿತ್ರದ ನಾಯಕನಾಗಿ ಆಯ್ಕೆ ಮಾಡಿದ್ದಾರೆ. ಧಾರವಾಡದ ಹುಡುಗಿ ಐಶ್ವರ್ಯಳನ್ನು ಚಿತ್ರದ ನಾಯಕಿಯನಾಗಿ ಮಾಡಿದ್ದಾರೆ ಹಾಗೂ ಅಭಿನಯ ತರಂಗದಿಂದ ಅನುಭವ ಪಡೆದಿರುವ ಸಾಕಷ್ಟು ಹುಡುಗರು ಚಿತ್ರದಲ್ಲಿ ಸಹಕಲಾವಿದರಾಗಿ ಅಭಿನಯಿಸಿದ್ದಾರೆ.
'ಕಲರವ' ಚಿತ್ರದ ನಿರ್ದೇಶನಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದ ತಿಮ್ಮರಾಜು 'ಅರವಿಂದ' ಚಿತ್ರದ ನಿರ್ದೇಶಕರು. ಇವರೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆ ಬರೆದಿದ್ದಾರೆ. ರಮೇಶ್ ಆಲ್ಬೈ ಛಾಯಾಗ್ರಹಣ, ಶ್ರೀನಿವಾಸ ಬಾಬು ಸಂಕಲನ, ಅಶೋಕ್-ಪ್ರಭಾ ಸಂಗೀತ, ಹ್ಯಾರಿಸ್ ಜಾನಿ ಸಾಹಸ, ಶ್ರೀನಿವಾಸ್-ಜೋಗಿ ನಾಗೇಶ್ ನೃತ್ಯ, ರಮೇಶ್ ಅವರ ನಿರ್ಮಾಣ ನಿರ್ವಹಣೆಯಿದೆ.
ಈ ಸಂತೋಷ್ಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಅರವಿಂದ್ ರಾಜ, ಐಶ್ವರ್ಯ, ಸಂಜನಾ, ಪ್ರಮಿಳಾ ಸುಬ್ರಹ್ಮಣ್ಯ, ಮಿಲ್ಟ್ರಿ ಮಂಜು, ಮುತ್ತುರಾಜ್, ಅರುಣ್, ಮಣಿ ಹಾಗೂ ಅಭಿನಯ ತರಂಗದ ಅನುಭವಿಗಳು 'ಅರವಿಂದ' ಚಿತ್ರದಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)