ಸುನಾಯಾಸವಾಗಿ ಇಪ್ಪತ್ತೈದು ಪೂರೈಸಿದ ಗೋವಿಂದ
ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸುನಾಯವಾಗಿ ಗೋವಿಂದ ಬೆಳ್ಳಿಹಬ್ಬ ಆಚರಿಸಿಕೊಂಡಿದ್ದಾನೆ. ಅಂದರೆ ಇಪ್ಪತ್ತೈದು ವಾರ ಅಲ್ಲ, ಇಪ್ಪತ್ತೈದು ದಿನಗಳನ್ನು ಪೂರೈಸಿದ್ದಾನೆ. ಗೋವಿಂದ ಐವತ್ತು ದಿನ, ಸೆಂಚುರಿ ಬಾರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಾರೆ ಗೋವಿಂದಾಯ ನಮಃ ಚಿತ್ರದ ನಿರ್ಮಾಪಕ ಕೆಎ ಸುರೇಶ್.
ಗೋವಿಂದ 25 ಪೂರೈಸಿದ ಸಂದರ್ಭದಲ್ಲಿ ಚಿತ್ರತಂಡ ಗೋವಿಂದ 25 ಕೇಕ್ ಕತ್ತರಿಸಿ ಸಂಭ್ರಮಿಸಿತು. ಈ ಸಂಭ್ರಮಕ್ಕೆ ಯೋಗರಾಜ್ ಭಟ್, ನಿರ್ದೇಶಕ ಪ್ರೇಮ್, ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ನಟನಟಿಯರಾದ ಪ್ರೇಮ್ ಕುಮಾರ್, ಚಿರಂಜೀವಿ ಸರ್ಜಾ, ಶ್ವೇತಾ, ಮಹೇಶ್ ಬಾಬು ಮುಂತಾದವರು ಸಾಕ್ಷಿಯಾದರು.
ಗೋವಿಂದಾಯ ನಮಃ ಚಿತ್ರದ ಮೇಲೆ ಕಳ್ಳತನದ ಆರೋಪವನ್ನೂ ಹೊರಿಸಲಾಗಿತ್ತು. ವೇಣುಗೋಪಾಲ್ ಎಂಬುವವರು, ತಮ್ಮ ಕತೆ ಕದ್ದಿದ್ದಾರೆ ಎಂದು ದೂರಿದ್ದರು. ಗೋವಿಂದ ಈ ಆರೋಪದಿಂದ ಮುಕ್ತನಾಗಿ ಈಗ ನಿರಾಳನಾಗಿದ್ದಾನೆ. ದಿನೇ ದಿನೇ ಎಲ್ರದ್ದೂ ದಿಲ್ ಗೆಲ್ಲುತ್ತಿದ್ದಾನೆ. (ಒನ್ಇಂಡಿಯಾ ಕನ್ನಡ)
More from Filmibeat
English summary
Komal Kumar lead Kannada film Govindaya Namaha completes 25 days and running successfully all over Karnataka. The movie showing successfully in all the centres said the producer Suresh.


Click it and Unblock the Notifications











