Don't Miss!
- News Lok Sabha Election: ರಾಜಕೀಯ ಅಖಾಡದಲ್ಲಿ ನಕಲಿ ಅಭ್ಯರ್ಥಿಗಳ ಸೌಂಡ್ ಜೋರು: ಅಖಾಡದಲ್ಲಿ ನಕಲಿ ರಾಹುಲ್ ಗಾಂಧಿ, ಪಿಎಸ್ ಯಡಿಯೂರಪ್ಪ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಟೋ ರಾಜ'ದಿಂದ ಅಜಯ್ ಔಟ್: ಯಶಸ್ ಇನ್?
'ಆಟೋ ರಾಜ' ಚಿತ್ರಕ್ಕೆ ಪ್ರೇಕ್ಷಕರು ಆಯ್ಕೆ ಮಾಡಿರುವ ಹೀರೋ ಅಜಯ್ ರಾವ್. ಚಿತ್ರತಂಡವೇ ಜಾಹೀರಾತು ನೀಡಿ, ಕೊನೆಗೆ ಅಜಯ್ ರಾವ್ ಆಯ್ಕೆ ಆಗಿದ್ದಾರೆ ಎಂದು ಪ್ರಕಟಿಸಿತ್ತು ಕೂಡ. ಈಗ ಅದೇನಾಯ್ತೋ? ನಿರ್ದೇಶಕ ಉದಯ ಪ್ರಕಾಶ್ ಹೊಸ ನಾಯಕನ ಹುಡುಕಾಟದಲ್ಲಿದ್ದಾರೆ. ಅಜಯ್ ರಾವ್ ನಟಿಸುವುದಿಲ್ಲ ಎಂದಿದ್ದಾರೆ.
80ರ ದಶಕದಲ್ಲಿ ಬಂದಿದ್ದ 'ಆಟೋ ರಾಜ' ಚಿತ್ರ ನಟ ಶಂಕರ್ ನಾಗ್ ಅವರ ಸಿನಿ ಜೀವನಕ್ಕೆ ಹೊಸ ತಿರುವು ಕೊಟ್ಟ ಚಿತ್ರ. ಆ ಹೆಸರಿನ ಚಿತ್ರವನ್ನು ಬೇರೆ ಕಥೆಯಿಟ್ಟು ತೆರೆಗೆ ತರಲಿರುವವರು 'ಸ್ಯಾನ್ ವಿಷನ್ಸ್ ಕಂಪನಿಯ ಎಂ. ಡಿ. ವಿಶ್ವ ಮತ್ತು ಗಿರೀಶ್. ಇದಕ್ಕೆ ನಿರ್ದೇಶಕರಾಗಿ ಉದಯ ಪ್ರಕಾಶ್ ಸಾಥ್ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಆಯ್ಕೆಯಾದ ನಾಯಕ ಕೈಎತ್ತಿದ್ದಾರೆ, ಮತ್ತೆ ನಾಯಕ ಸಿಗಬೇಕಾಗಿದೆ.
ಮದುವೆಯಾಗದ ನಾಯಕರೇ ಬೇಕೆನ್ನುವುದು ನಿರ್ದೇಶಕರ ಆಸೆ. ಅದರಂತೆ ಈಗ ಕನ್ನಡದ ಅವಿವಾಹಿತ ಹೀರೋಗಳತ್ತ ನೋಟ ಬೀರಿರುವ ನಿರ್ದೇಶಕರಿಗೆ 'ಶಿಶಿರ' ಚಿತ್ರದಲ್ಲಿ ಗಮನಾರ್ಹವಾಗಿ ನಟಿಸಿದ್ದ 'ಯಶಸ್ ಸೂರ್ಯ' ಕಣ್ಣಿಗೆ ಬಿದ್ದಿದ್ದಾರಂತೆ. ಅವರು ಓಕೆ ಅನ್ನದಿದ್ದರೆ ಮುಂದಿನ ಬದಲಾವಣೆಯಾಗಿ ಯಶ್ ಅಥವಾ ದಿಗಂತ್ ಬರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎನ್ನಲಾಗಿದೆ. (ಒನ್ ಇಂಡಿಯಾ ಕನ್ನಡ)