twitter
    For Quick Alerts
    ALLOW NOTIFICATIONS  
    For Daily Alerts

    ಮುಹೂರ್ತದ ನಂತರ ಅಕ್ಷಯ್ 'ಸಿಂಡ್ರೆಲ್ಲಾ' ನಾಪತ್ತೆ

    |

    Akshay Sushma
    ಗಂಗಾ ಕಾವೇರಿ ಚಿತ್ರದ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದ, ಆದರೆ ಚಿತ್ರ ತೋಪೆದ್ದು ಮನೆ ಸೇರಿದ್ದ ನಟ ಅಕ್ಷಯ್, ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ್ದರು. ಸಿಂಡ್ರೆಲ್ಲಾ ಚಿತ್ರ ಸೆಟ್ಟೇರುವ ಮೂಲಕ ಕೆಲವು ತಿಂಗಳುಗಳ ಹಿಂದೆ ಅದಕ್ಕೆ ಚಾಲನೆ ದೊರೆತಿತ್ತು. ಮಧುಕರ್ ಬೆಳಕವಾಡಿ ಈ ಚಿತ್ರದ ನಿರ್ದೇಶಕರು.

    ಮಾರುತಿ ರಾಜ್ ಹೆಸರಿನ ನಿರ್ಮಾಪಕರು ಸಿಂಡ್ರೆಲ್ಲಾ ಚಿತ್ರಕ್ಕೆ ರು. 1.25 ಕೋಟಿ ಖರ್ಚು ಮಾಡಿ ಸಾಕಷ್ಟು ಶೂಟಿಂಗ್ ಕೂಡ ನಡೆಸಿದ್ದರು. ಧರ್ಮಗಿರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಪ್ರಾರಂಭವಾದ ಚಿತ್ರೀಕರಣ ಅರ್ಧಕ್ಕೇ ನಿಂತಿದ್ದು ಮುಂದುವರಿಯುವ ಸೂಚನೆ ಕಾಣಿಸುತ್ತಿಲ್ಲ. ಅಕ್ಷಯ್ ನಾಯಕ ಹಾಗೂ ಸುಷ್ಮಾ ನಾಯಕಿ. ಪಿ ಸುದರ್ಶನ್ ಸಂಗೀತ ಚಿತ್ರಕ್ಕಿದೆ.

    ಚಿತ್ರತಂಡ ಮೌನವಾಗಿದೆ. ಚಿತ್ರಕ್ಕೆ ಯಾವ ಕಡೆಯಿಂದ, ಯಾವ ರೀತಿ ವಿಘ್ನ ಕಾದಿದೆಯೋ ಸುದ್ದಿಯಿಲ್ಲ. ನಾಯಕಿ ಸುಷ್ಮಾರ ನಂತರದ ಎರಡು ಚಿತ್ರಗಳು ಬಿಡುಗಡೆ ಭಾಗ್ಯ ಕಂಡಿವೆ. ಆದರೆ ಸಿಂಡ್ರೆಲ್ಲಾ ಕಥೆ ಏನು ಎನ್ನುವುದು ಸದ್ಯಕ್ಕೆ ನಿಗೂಢ. ಈ ಸುದ್ದಿಯ ನಂತರವಾದರೂ ಪತ್ತೆಯಾದರೆ ಸಾಕು ಎಂಬಂತಾಗಿದೆ. (ಒನ್ ಇಂಡಿಯಾ ಕನ್ನಡ)

    English summary
    Kannada Movie Cinderella shooting discontinued. Madhukar Belakawadi direction for this movie. Akshay Sushma Pair for this. 
 
    Tuesday, December 27, 2011, 18:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X