Just In
Don't Miss!
- News
ಶಿವಮೊಗ್ಗದಲ್ಲಿ ಭಾರಿ ಸ್ಫೋಟ: ಕಂಪಿಸಿದ ಭೂಮಿ, ಜನತೆಯಲ್ಲಿ ಭಯ
- Sports
SMAT: ಮೊದಲ ಕ್ವಾ.ಫೈನಲ್ನಲ್ಲಿ ಕರ್ನಾಟಕ್ಕೆ ಪಂಜಾಬ್ ಎದುರಾಳಿ
- Finance
ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್- ಇಂಡಿಯಾಗೆ RBIನಿಂದ 2 ಕೋಟಿ ರು. ದಂಡ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಿನಿಮಾ ತಾರೆ ಪೂಜಾಗಾಂಧಿ ಕಣ್ಣೀರಧಾರೆ ಕತೆ
ಮುಂಗಾರು ಮಳೆ ಬೇಬಿ ಪೂಜಾಗಾಂಧಿ ಕಣ್ಣೀರ ಕತೆಯಿದು. ಸ್ಯಾಂಡಲ್ವುಡ್ನಲ್ಲಿ ಬಹಳಷ್ಟು ತಾರೆಗಳು ಮಹಿಳೆಯರ ಕೈಗೆ ಕರ್ಚೀಫು ಕೊಟ್ಟು ಬಿಕ್ಕಿಬಿಕ್ಕಿ ಅಳುವಂತೆ ಮಾಡಿದ್ದಾರೆ. ಈಗ ಪೂಜಾಗಾಂಧಿ ಕೂಡ ಕಣ್ಣೀರಧಾರೆ ಹರಿಸಲು ಬರುತ್ತಿದ್ದಾರೆ. ಈ ಮೂಲಕ 'ತವರಿನ ಋಣ' ತೀರಿಸಲಿದ್ದಾರೆ.
ಕನ್ನಡದಲ್ಲಿ ಶ್ರುತಿ, ರಾಧಿಕಾ ಜಾಗ ಖಾಲಿ ಆದ ಮೇಲೆ ಆ ಪಾತ್ರಗಳನ್ನು ತುಂಬುವುದೇ ಕಷ್ಟವಾಗಿದೆ. ತವರಿನ ಸಿರಿ, ತಾಯಿ ಇಲ್ಲದ ತವರು, ತವರುಮನೆ ಉಡುಗೊರೆ ಚಿತ್ರಗಳ ಬಳಿಕ ಮತ್ತೊಮ್ಮೆ ಹೆಂಗೆಳೆಯರ ಮುಂದೆ ಬರುತ್ತಿದ್ದಾರೆ ಕರುಳು ಕಲಕಲು ಚಿತ್ರ 'ತವರಿನ ಋಣ' ಮೂಲಕ.
ತವರಿಣ ಚಿತ್ರದಲ್ಲಿ ಪೂಜಾಗಾಂಧಿ ಅವರದು ವಿಧವೆ ಪಾತ್ರ. ರಾಜಕಾರಣಿಯಾಗಿ ತಬಲಾ ನಾಣಿ ಹಾಗೂ ಖಳನಾಯಕನಾಗಿ ಮುನಿ ಕಾಣಿಸಲಿದ್ದಾರೆ. ನಿರ್ಮಾಪಕರಲ್ಲಿ ಒಬ್ಬರಾದ ಶ್ರೀರಾಮುಲು ಚಿತ್ರದಲ್ಲಿ ಎರಡನೇ ನಾಯಕ ನಟ. ಪಾತ್ರವರ್ಗದಲ್ಲಿ ಕೃಷ್ಣೇಗೌಡ, ಗಿರಿಜಾ ಲೋಕೇಶ್, ಆಶಾರಾಣಿ ಇದ್ದಾರೆ.
ಸಂಗೀತ ಸಂಯೋಜನೆ ಅಭಿಮಾನ್ ರಾಯ್ ಹಾಗೂ ಛಾಯಾಗ್ರಹಣ ಜಗದೀಶ್ ವಾಲಿ. ಡಾ.ವಿಷ್ಣುವರ್ಧನ್ ಮತ್ತು ಸಿತಾರ ನಟಿಸಿದ್ದ 'ಹಾಲುಂಡ ತವರು' ಚಿತ್ರಕ್ಕೂ ನಮ್ಮ 'ತವರಿನ ಋಣ' ಚಿತ್ರಕ್ಕೂ ಎಲ್ಲೂ ಸಾಮ್ಯತೆ ಇರುವುದಿಲ್ಲ ಎನ್ನುತ್ತಾರೆ ನಿರ್ದೇಶಕ ರಮೇಶ್ ರಾಜ್. (ದಟ್ಸ್ಕನ್ನಡ ಸಿನಿವಾರ್ತೆ)