Don't Miss!
- News Lok Sabha Election: ಗೂಗಲ್ನಲ್ಲೂ ಪ್ರಜಾಪ್ರಭುತ್ವದ ಹಬ್ಬದ ಸಂಭ್ರಮ
- Automobiles Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಮಿಳುನಟ ಸಿದ್ಧಾರ್ಥ್, ರಮ್ಯಾಗೆ 'ಪ್ಯಾರ್ಗೆ ಆಗ್ಬಿಟ್ಟೈತೆ'
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಅಭಿಮಾನಿಗಳಿಗೆ ಬರವಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ರಮ್ಯಾ ಬಹಳಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಇದೀಗ ಹೊಸ ವಿಷಯವೆಂದರೆ ರಮ್ಯಾಗೆ ಕನ್ನಡ ಹಾಡೊಂದನ್ನು ಎಷ್ಟು ಸಲ ಬೇಕಾದರೂ ಹಾಡುವುದಾಗಿ ತಮಿಳು ನಟನೊಬ್ಬ ಅಭಿಮಾನದಿಂದ ಹೇಳಿಕೊಂಡಿರುವುದು.
ತಮಿಳು ನಟ ಸಿದ್ಧಾರ್ಥ್ ಕನ್ನಡದ ಇತ್ತೀಚಿನ ಸೆನ್ಸೇಷನಲ್ ಹಾಡು 'ಪ್ಯಾರ್ಗೆ ಆಗ್ಬಿಟ್ಟೈತೆ...'ಹಾಡನ್ನು ಬಹಳ ಮೆಚ್ಚಿಕೊಂಡಿದ್ದಾರಂತೆ. ರಮ್ಯಾ ಹಾಗೂ ಸಿದ್ಧಾರ್ಥ್ ಇತ್ತೀಚಿಗೆ ಭೇಟಿಯಾದಾಗ ಈ ಹಾಡನ್ನು ಅವರು ರಮ್ಯಾ ಮುಂದೆ ಚೆನ್ನಾಗಿ ಹಾಡಿದ್ದಾರಂತೆ. ಅದರ ವಿಡಿಯೋ ಕೂಡ ಇದೆ ಎಂದು ರಮ್ಯಾ ತಿಳಿಸಿದ್ದಾರೆ. ಇದೊಂದೇ ಸಲವಲ್ಲ, ನಿನಗಾಗಿ ಈ ಹಾಡನ್ನು ನಾನು ಯಾವಾಗ ಬೇಕಾದರೂ ಹಾಡ್ತೇನೆ ಎಂದಿದ್ದಾರಂತೆ ಸ್ವತಃ ಸಿದ್ಧಾರ್ಥ್.
ಅಂದ ಹಾಗೆ, ಸಿದ್ದಾರ್ಥ್ ಮತ್ತು ರಮ್ಯಾ ತಮಿಳು ನಿರ್ದೇಶಕ ವೇಟ್ರಿಮಾರನ್ ಮುಂದಿನ ಚಿತ್ರವೊಂದರಲ್ಲಿ ಜೋಡಿಯಾಗುವ ಸಾಧ್ಯತೆಗಳಿವೆ. 'ವಡಾ ಚೆನ್ನೈ' ಹೆಸರಿನ ಚಿತ್ರದಲ್ಲಿ ನಟಿಸಲಿದ್ದೇನೆ ಅಂತ ಕೆಲವು ದಿನಗಳ ಹಿಂದೆ ರಮ್ಯಾ ಹೇಳಿದ್ದರು. ಆ ಚಿತ್ರದಲ್ಲಿ ಸಿದ್ಧಾರ್ಥ್ ಕೂಡ ನಟಿಸಲಿರುವುದು ಖಾತ್ರಿಯಾಗಿದೆ. ಅಧಿಕೃತ ಮಾಹಿತಿ ಸದ್ಯದಲ್ಲೇ ಬರಲಿದೆಯಂತೆ. ಒಟ್ಟಿನಲ್ಲಿ ತಮಿಳಿನ ಕೊಲವೆರಿ ಹಾಡಿನಂತೆ ಕನ್ನಡದ ಹಾಡೂ ಕೂಡ ಜಾದೂ ಮಾಡಿದೆ. (ಒನ್ ಇಂಡಿಯಾ ಕನ್ನಡ)