Don't Miss!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Sports PBKS vs MI IPL 2024: ಪಂಜಾಬ್ ರಾಜರಿಗೆ ಮುಂಬೈ ಇಂಡಿಯನ್ಸ್ ಸವಾಲು; ಟಾಸ್ ವರದಿ, ಆಡುವ 11ರ ಬಳಗ
- Lifestyle ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- News Karnataka Lok Sabha Elections: ರಾಷ್ಟ್ರೀಯ ಮುಖಂಡರು VS ರಾಜ್ಯ ನಾಯಕರು; ಗೆಲ್ಲೋದು ಯಾರು?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರವಿಮಾಮನ ತೆಕ್ಕೆಯಲ್ಲಿ ನಲುಗಿದ ಹೂಗಳು
ಸಾಕಷ್ಟು ಸಂಕಷ್ಟಗಳ ಪಾಲಾಗಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ 'ಹೂ' ಕಡೆಗೂ ಮುಡಿಗೇರುವ ಭಾಗ್ಯ ದೊರಕಿದೆ. ಇಷ್ಟೊತ್ತಿಗಾಗಲೆ ಚಿತ್ರ ಮಂದಿರಗಳಲ್ಲಿ 'ಹೂ' ಅರಳಿ ಹಣ್ಣಾಗಬೇಕಾಗಿತ್ತು. ರವಿ ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತೆ ಅಂದುಕೊಂಡಿದ್ದ 'ಹೂ'ಗೆ ಮುಕ್ತಿ ಸಿಕ್ಕಿರಲಿಲ್ಲ. ಈಗಾಗಲೆ ರವಿ ಕೈಯಲ್ಲಿ ಸಾಕಷ್ಟು ನಲುಗಿರುವ ಹೂ ಕಡೆಗೂ ಜೂನ್ 4ರಂದು ಅರಳುತ್ತಿದೆ .
'ಹೂ'ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಅಂದುಕೊಂಡಂತೆ ಎಲ್ಲಾ ನಡೆದಿದ್ದರೆ ಮೇ.28ರಂದೇ ಹೂ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರಮಂದಿರಗಳ ಕೊರತೆಯ ಕಾರಣ 'ಹೂ' ಮುಡಿದ ತಾವರೆಯಂತಾಯಿತು.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸೆಟ್ಟೇರಿದ 'ಹೂ' ಚಿತ್ರಕ್ಕೆ ಸಾಕಷ್ಟು ವಿಘ್ನಗಳು ಎದುರಾಗಿದ್ದವು. ಈ ಚಿತ್ರಕ್ಕೆ ರವಿಚಂದ್ರ ಸಂಗೀತ ಸಂಯೋಜಿಸದೆ ತಮ್ಮ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ಹರಿಕೃಷ್ಣ ಅವರ ಕೈಗೆ ಒಪ್ಪಿಸಿದ್ದಾರೆ. ತಮ್ಮ ಮೇಲೆ ನಂಬಿಕೆ ಇಲ್ಲ ಎಂದಲ್ಲ. ಹರಿಕೃಷ್ಣ ಮೇಲಿನ ವಿಶ್ವಾಸದಿಂದ ರವಿ ಹಾಗೆ ಮಾಡಿದ್ದರು.
ಬೇಸಿಗೆ, ಮಳೆಗಾಲ, ಚಳಿಗಾಲಗಳು ಕಳೆಯುತ್ತಿದ್ದರೂ ಕನಸುಗಾರನ ಕನಸು 'ಮಂಜಿನ ಹನಿ'ಗೆ ಮುಕ್ತಿ ಸಿಕ್ಕಿಲ್ಲ. ಈ ಚಿತ್ರವನ್ನು ವಿಭಿನ್ನವಾಗಿ ಪ್ರೇಕ್ಷಕರ ಮುಂದೆ ತರಬೇಕು ಎಂಬ ತುಡಿತ ರವಿ ಅವರದ್ದು. ಮಂಜಿನ ಹನಿಯನ್ನು ಅರ್ಧಕ್ಕೆ ಬಿಟ್ಟು 'ಹೂ' ಚಿತ್ರವನ್ನು ರವಿ ಕೈಗೆತ್ತಿಕೊಂಡಿದ್ದರು. ನಮಿತಾ, ಮೀರಾ ಜಾಸ್ಮಿನ್ ಎಂಬ ಎರಡು ಬೆಟ್ಟದ ಹೂಗಳು ಚಿತ್ರದಲ್ಲಿದ್ದು ಪ್ರೇಕ್ಷಕರಿಗೆ ಪಾಲಿಗೆ ಪಂಚಾಮೃತವಾಗಲಿದೆ.