Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರವಿಮಾಮನ ತೆಕ್ಕೆಯಲ್ಲಿ ನಲುಗಿದ ಹೂಗಳು
ಸಾಕಷ್ಟು ಸಂಕಷ್ಟಗಳ ಪಾಲಾಗಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ 'ಹೂ' ಕಡೆಗೂ ಮುಡಿಗೇರುವ ಭಾಗ್ಯ ದೊರಕಿದೆ. ಇಷ್ಟೊತ್ತಿಗಾಗಲೆ ಚಿತ್ರ ಮಂದಿರಗಳಲ್ಲಿ 'ಹೂ' ಅರಳಿ ಹಣ್ಣಾಗಬೇಕಾಗಿತ್ತು. ರವಿ ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತೆ ಅಂದುಕೊಂಡಿದ್ದ 'ಹೂ'ಗೆ ಮುಕ್ತಿ ಸಿಕ್ಕಿರಲಿಲ್ಲ. ಈಗಾಗಲೆ ರವಿ ಕೈಯಲ್ಲಿ ಸಾಕಷ್ಟು ನಲುಗಿರುವ ಹೂ ಕಡೆಗೂ ಜೂನ್ 4ರಂದು ಅರಳುತ್ತಿದೆ .
'ಹೂ'ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಅಂದುಕೊಂಡಂತೆ ಎಲ್ಲಾ ನಡೆದಿದ್ದರೆ ಮೇ.28ರಂದೇ ಹೂ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರಮಂದಿರಗಳ ಕೊರತೆಯ ಕಾರಣ 'ಹೂ' ಮುಡಿದ ತಾವರೆಯಂತಾಯಿತು.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸೆಟ್ಟೇರಿದ 'ಹೂ' ಚಿತ್ರಕ್ಕೆ ಸಾಕಷ್ಟು ವಿಘ್ನಗಳು ಎದುರಾಗಿದ್ದವು. ಈ ಚಿತ್ರಕ್ಕೆ ರವಿಚಂದ್ರ ಸಂಗೀತ ಸಂಯೋಜಿಸದೆ ತಮ್ಮ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ಹರಿಕೃಷ್ಣ ಅವರ ಕೈಗೆ ಒಪ್ಪಿಸಿದ್ದಾರೆ. ತಮ್ಮ ಮೇಲೆ ನಂಬಿಕೆ ಇಲ್ಲ ಎಂದಲ್ಲ. ಹರಿಕೃಷ್ಣ ಮೇಲಿನ ವಿಶ್ವಾಸದಿಂದ ರವಿ ಹಾಗೆ ಮಾಡಿದ್ದರು.
ಬೇಸಿಗೆ, ಮಳೆಗಾಲ, ಚಳಿಗಾಲಗಳು ಕಳೆಯುತ್ತಿದ್ದರೂ ಕನಸುಗಾರನ ಕನಸು 'ಮಂಜಿನ ಹನಿ'ಗೆ ಮುಕ್ತಿ ಸಿಕ್ಕಿಲ್ಲ. ಈ ಚಿತ್ರವನ್ನು ವಿಭಿನ್ನವಾಗಿ ಪ್ರೇಕ್ಷಕರ ಮುಂದೆ ತರಬೇಕು ಎಂಬ ತುಡಿತ ರವಿ ಅವರದ್ದು. ಮಂಜಿನ ಹನಿಯನ್ನು ಅರ್ಧಕ್ಕೆ ಬಿಟ್ಟು 'ಹೂ' ಚಿತ್ರವನ್ನು ರವಿ ಕೈಗೆತ್ತಿಕೊಂಡಿದ್ದರು. ನಮಿತಾ, ಮೀರಾ ಜಾಸ್ಮಿನ್ ಎಂಬ ಎರಡು ಬೆಟ್ಟದ ಹೂಗಳು ಚಿತ್ರದಲ್ಲಿದ್ದು ಪ್ರೇಕ್ಷಕರಿಗೆ ಪಾಲಿಗೆ ಪಂಚಾಮೃತವಾಗಲಿದೆ.