Don't Miss!
- Automobiles Bangaluru: ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ.. ಎಷ್ಟಿದೆ ದರ?
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೆಬಲ್ ಸ್ಟಾರ್ ಅಂಬರೀಷ್ ಅವರ ಹೊಸ ಚಿತ್ರದ ಹೆಸರು ವಜ್ರ
ರೆಬಲ್ ಸ್ಟಾರ್ ಅಂಬರೀಷ್ ಈಗ ಮತ್ತೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. 'ವೀರ ಪರಂಪರೆ' ಬಳಿಕ ಅಂಬಿಯನ್ನು ಹುಡುಕಿಕೊಂಡು ಬಂದಿರುವ ಮತ್ತೊಂದು ಪ್ರಮುಖ ಪಾತ್ರವಿದು. ಚಿತ್ರದ ಹೆಸರು ಏನೆಂದರೆ ವಜ್ರ. ಸ್ವಯಂಕೃಷಿ ಎಂಬ ಮತ್ತೊಂದು ಚಿತ್ರದಲ್ಲೂ ಅಂಬಿ ಮುಖ್ಯಮಂತ್ರಿಯಾಗಿ ಅಭಿನಯಿಸುತ್ತಿದ್ದಾರೆ.
ಅಂದಹಾಗೆ ವಜ್ರ ಪ್ರೇಮಾಕಥಾ ಹಂದರವುಳ್ಳ ಚಿತ್ರ. ಪ್ರೀತಿ ಯಾವಾಗಲು ವಜ್ರದಂತೆ ಹೊಳೆಯುತ್ತಿರುತ್ತದೆ ಎಂಬುದು ಚಿತ್ರದ ಸಾರಾಂಶ. ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಅರ್ಜುನ್. ಚಿತ್ರದ ಮೂರು ಹಾಡುಗಳ ರೀರೆಕಾರ್ಡಿಂಗ್ ಮುಗಿದಿದ್ದು ಇನ್ನೆರಡು ಹಾಡುಗಳ ರೀರೆಕಾರ್ಡಿಂಗ್ ನಡೆಯಬೇಕಾಗಿದೆ. ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎನ್ನುತ್ತಾರೆ ಅರ್ಜುನ್.
ಒಟ್ಟು 18 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು ಮೈಸೂರಿನಲ್ಲಿ ಶೇ.80ರಷ್ಟು ಚಿತ್ರೀಕರಿಸಲಿದ್ದಾರೆ. ಉಳಿದ ಭಾಗದ ಚಿತ್ರೀಕರಣ ಮಂಗಳೂರು, ಬೆಂಗಳೂರು ಮತ್ತು ಮಂಡ್ಯದಲ್ಲಿ ನಡೆಯಲಿದೆ. ಚಿತ್ರದ ನಾಯಕ ನಟ ಜಯ ಪ್ರಸಾದ್ ನಾಯಕ. ಜೆನ್ನಿಫರ್ ಕೊತ್ವಾಲ್ ಚಿತ್ರದ ನಾಯಕಿ. ಸಾಧು ಕೋಕಿಲ, ರಂಗಾಯಣ ರಘು ತಾರಾಗಣವಿದೆ. ಸುಂದರನಾಥ ಸುವರ್ಣ ಅವರ ಸೋದರ ರವಿ ಸುವರ್ಣ ಅವರ ಛಾಯಾಗ್ರಹಣ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಶಿಷ್ಯ ಕಾಸ ವಸಿಷ್ಠ ಅವರ ಸಂಗೀತ ಚಿತ್ರಕ್ಕಿರುತ್ತದೆ.