Don't Miss!
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ಎರಡು ರೇಖೆಗಳು’ ಒಂದಾಗಲು ಸಾಧ್ಯವಿಲ್ಲವೆ, ಸರಿತಾ?
ತಾರಾಜೋಡಿಗಳು ಕೂಡಿ ಬಾಳುವುದಕ್ಕಿಂತ, ಕೂಡದೇ ಬಾಳುವುದೇ ಹೆಚ್ಚು! ‘ತಾರಾಜೋಡಿ ಮದುವೆ ಬೆನ್ನಲ್ಲಿಯೇ ಡೈವರ್ಸ್ ಸಹಾ ಅಂಟಿಕೊಂಡಿರುತ್ತದೆ’ --ಈ ಮಾತಿಗೆ ನಟಿ ಸರಿತಾ ಸಹಾ ಹೊರತಲ್ಲ! ಹೌದು ಹಿರಿಯ ನಟಿ ಸರಿತಾ, ತಮ್ಮ ಪತಿಯಿಂದ ವಿಚ್ಛೇದನ ಪಡೆಯಲು ಕೋರ್ಟ್ ಕಟ್ಟೆ ಮೇಲೆ ನಿಂತಿದ್ದಾರೆ.
ಮಲಯಾಳಂ ನಟ ಮುಖೇಶ್ರನ್ನು ಮದುವೆಯಾಗಿದ್ದ ಸರಿತಾ, ಈಗ ವಿಚ್ಛೇದನ ಪಡೆಯಲು ಚೆನ್ನೈನ ಕೌಟುಂಬಿಕ ನ್ಯಾಯಾಲಯದ ಮುಂದೆ ನಿಂತಿದ್ದಾರೆ. ಗಂಡನೊಂದಿಗೆ ಬದುಕು ಹಂಚಿಕೊಳ್ಳಲು ಕಷ್ಟವಾಗಿದೆ. ದಯವಿಟ್ಟು ಬಿಡುಗಡೆ ನೀಡಿ ಎಂದು ಕೋರ್ಟ್ಗೆ ಅವರು ಮನವಿ ಸಲ್ಲಿಸಿದ್ದಾರೆ.
ಕೆ.ಬಾಲಚಂದರ್ ನಿರ್ದೇಶನದ ‘ತಪ್ಪು ತಾಳಂಗಲ್’ ಮೂಲಕ ಬಣ್ಣದ ಬದುಕು ಆರಂಭಿಸಿದ ಸರಿತಾ, ಕನ್ನಡ ತಮಿಳು, ತೆಲುಗಿನಲ್ಲಿ ಮನೆಮಾತು. ತಮ್ಮ ಪ್ರಬುದ್ಧ ಅಭಿನಯದಿಂದ ಸರಿತಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ‘ ಮರೋಚರಿತ್ರಾ’, ‘ತಣ್ಣೀರ್ ತಣ್ಣೀರ್’, ‘ಅಗ್ನಿಸಾಕ್ಷಿ’, ಕನ್ನಡದಲ್ಲಿ ‘ಎರಡು ರೇಖೆ’, ‘ಹೊಸಬೆಳಕು’, ‘ಚಲಿಸುವ ಮೋಡಗಳು’, ‘ಕಾಮನಬಿಲ್ಲು ’ ಮತ್ತಿತರ ಚಿತ್ರಗಳಲ್ಲಿ ಸರಿತಾ, ತಮ್ಮ ಕಲಾ ಪ್ರತಿಭೆಯನ್ನು ಬಿಚ್ಚಿಟ್ಟಿದ್ದಾರೆ.
ದಶಕಗಳ ಹಿಂದೆ ನಟ ಮುಖೇಶ್ರೊಂದಿಗೆ ದಾಂಪತ್ಯ ಪ್ರವೇಶಿಸಿದ್ದ ಸರಿತಾ, ಪ್ರತ್ಯೇಕ ಬದುಕನ್ನು ಬಯಸುತ್ತಿದ್ದಾರೆ. ಮತ್ತೊಂದು ದಡದಲ್ಲಿರುವ ಪತಿ ಮುಖೇಶ್, ಕೊಚ್ಚಿಯ ಫ್ಯಾಮಿಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತಿಂಗಳಿಗೆ ಒಂದು ಸಲ ನನ್ನ ಇಬ್ಬರು ಮಕ್ಕಳನ್ನು ನೋಡಲು ಅವಕಾಶ ನೀಡಬೇಕೆಂದು ಅವರು ಕೋರಿದ್ದಾರೆ.
ಸರಿತಾ ಬದುಕಲ್ಲಿನ ಬಿರುಗಾಳಿ ದೂರವಾಗಲಿ.. ಮುರಿದ ಮನಸ್ಸುಗಳು ಒಂದಾಗಲಿ... ಎಂಬುದು ‘ದಟ್ಸ್ ಕನ್ನಡ’ ಹಾರೈಕೆ.