twitter
    For Quick Alerts
    ALLOW NOTIFICATIONS  
    For Daily Alerts

    ದಯಾನಾಯಕ್‌ಗೆ ಬೆಳಗೆರೆ ಡೈಲಾಗ್‌

    By Super
    |

    Ravi Belagere
    ಎನ್‌ಕೌಂಟರ್‌ ಸ್ಪೆಷಲಿಸ್ಟ್‌ , ಮುಂಬಯಿ ಪೊಲೀಸ್‌ ಜಗತ್ತಿನ ದಂತಕಥೆ ದಯಾನಾಯಕ್‌ ಸಾಹಸಗಾಥೆಯ ಚಿತ್ರಗಳು ಈಗಾಗಲೇ ಎಲ್ಲಾ ಭಾಷೆಗಳಲ್ಲೂ ಬಂದು ಹೋಗಿವೆ. ಕಗಾರ್‌, ಅಬ್‌ ತಕ್‌ ಛಪ್ಪನ್‌ ಹಿಂದಿ ಚಿತ್ರಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಈಗ ಕನ್ನಡದ ಸರದಿ.

    ಮೆಜೆಸ್ಟಿಕ್‌ ಮತ್ತು ಧರ್ಮ ಚಿತ್ರಗಳ ನಿರ್ಮಾಪಕರಾದ ರಾಮಮೂರ್ತಿ ಈಗ ದಯಾನಾಯಕ್‌ರನ್ನು ಕನ್ನಡಕ್ಕೆ ಕರೆತರುತ್ತಿದ್ದಾರೆ. ಚಿತ್ರದ ಹೆಸರೂ ದಯಾನಾಯಕ್‌.

    ದಯಾನಾಯಕ್‌ ವಿಶೇಷತೆ ಏನೆಂದರೆ- ದಟ್ಸ್‌ಕನ್ನಡದೊಂದಿಗೆ ಸ್ನೇಹಸಂಪರ್ಕ ಹೊಂದಿರುವ ಹಾಯ್‌ ಬೆಂಗಳೂರ್‌! ಪತ್ರಿಕೆಯ ಸಂಪಾದಕ ರವಿ ಬೆಳಗೆರೆಯವರ ಸಂಭಾಷಣೆ. ಸಿನಿಮಾ ಎಂದರೆ ಸಾಮಾನ್ಯವಾಗಿ ದೂರವಿರುವ ಬೆಳಗೆರೆ, ದಯಾನಾಯಕ್‌ಗೆ ಮಾತು ಬರೆಯಲು ಹೂಂಗುಟ್ಟಿದ್ದಾರೆ.

    ಭೂಗತ ಲೋಕ ಬೆಳಗೆರೆಗೆ ಅಂಗೈಗೆರೆಗಳಷ್ಟು ಸ್ಪಷ್ಟ. ಮುಂಬೈ ಭೂಗತ ಲೋಕದ ಬಗ್ಗೆಯೂ ಅವರಲ್ಲಿ ಸಾಕಷ್ಟು ಮೆಟೀರಿಯಲ್‌ ಇದೆ. ಹೀಗಾಗಿ ಬೆಳಗೆರೆ ಸಂಭಾಷಣೆ ಚಿತ್ರಕ್ಕೆ ಕಳೆಕಟ್ಟುವ ನಿರೀಕ್ಷೆಯಿದೆ. ಇನ್ನು , ಮುಂಬಯಿ ಭೂಗತ ಲೋಕಕ್ಕೆ 1970 ರಿಂದ ಪ್ರಾರಂಭವಾದ ಇತಿಹಾಸವಿದೆ. ಇದನ್ನೆಲ್ಲ ತಲೆಯಲ್ಲಿಟ್ಟುಕೊಂಡು ಮೈಸೂರು ಹರೀಶ್‌ ಕಥೆ ಹೊಸೆದಿದ್ದಾರೆ.

    English summary
    Dayanayak in Kannada ! Dialogues by Ravi Belagere, Hai Bengalore !
    Sunday, July 28, 2013, 17:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X