Don't Miss!
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದು ನಿಜಕ್ಕೂ ಮನೋಹರ ಶತಕ!
ಸೆಂಚುರಿ ಅನ್ನುವುದು ಮನೋಹರ್ಗೆ ಪುಳಕವನ್ನೇನು ತಂದಿಲ್ಲ. ಯಾವುದೋ ನೋವು, ಅತೃಪ್ತಿ ಮತ್ತು ವೇದನೆ ಅವರ ಮನದಿಂದ ಕೆಳಕ್ಕಿಳಿದಿಲ್ಲ.
- ಪುಷ್ಪಪಾದ
ಕಾಲ ಒಂದೇ ರೀತಿ ಇರೋದಿಲ್ಲ ಎಂಬುದಕ್ಕೆ ಮನೋಹರ್ ಮತ್ತೆ ಎದ್ದು ನಿಂತದ್ದೇ ನಿದರ್ಶನ. ಅವರು ಸಂಗೀತ ನೀಡಿದ ಇತ್ತೀಚಿನ ದುನಿಯಾ ಚಿತ್ರ, ಅವರ ಅಸ್ತಿತ್ವವನ್ನು ಮತ್ತೆ ಸಾಬೀತು ಮಾಡಿದೆ.
ಈಗ ವಿ.ಮನೋಹರ್ ಖುಷಿಯಲ್ಲಿದ್ದಾರೆ. ದುನಿಯಾ ಹಾಡುಗಳ ಯಶಸ್ಸಿನ ಖುಷಿ ಜೊತೆಗೆ, ಅವರ ಮುಂದಿನ ಇನ್ನೊಂದು ಸಂಭ್ರಮ ನೀನ್ಯಾರೇ?. ಈ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಮನೋಹರ್ ಸೆಂಚುರಿ ಹೊಡೆದಿದ್ದಾರೆ.
ಆದರೆ ಮನೋಹರ್ಗೆ ಈ ಬಗ್ಗೆ ಹೇಳಿಕೊಳ್ಳುವಂತಹ ಖುಷಿಯೇನಿಲ್ಲ. ಯಾವುದೋ ನೋವು, ಅತೃಪ್ತಿ, ವೇದನೆ ಅವರ ಮನದಿಂದ ಕೆಳಕ್ಕಿಳಿದಿಲ್ಲ. ಇಂಥ ಸಣ್ಣ ಸಂಗತಿಗಳು ಈಗ ನನಗೆ ಖುಷಿ ನೀಡುವುದಿಲ್ಲ. ಮೈ ರೋಮಾಂಚಗೊಳಿಸುವುದಿಲ್ಲ ಎನ್ನುತ್ತಾರೆ ಮನೋಹರ್. ಯಾಕೋ ಅವರು ವೇದಾಂತಿಯಾದರು. ಆದರೂ ಬಣ್ಣದ ನಂಟು ಅವರನ್ನು ಜೀವಂತವಾಗಿಟ್ಟಿದೆ.
ಸದ್ಯಕ್ಕೆ ನಿರ್ದೇಶನದತ್ತ ತಲೆ ಕೆಡಿಸಿಕೊಳ್ಳುವುದಿಲ್ಲ. ಈಗ ಅಕ್ಕತಂಗಿ, ತುಂತುರು ಮಳೆ, ಗಣೇಶ ಮತ್ತೆ ಬಂದ ಮತ್ತಿತರ ಚಿತ್ರಗಳಿಗೆ ಸಂಗೀತ ನೀಡುತ್ತಿದ್ದೇನೆ. ಅದರ ಜೊತೆಜೊತೆಗೆ ಬರೆವಣಿಗೆ ಮುಂದುವರೆಸುತ್ತೇನೆ ಎನ್ನುತ್ತಾರೆ ಮನೋಹರ್.
ತರ್ಲೆ ನನ್ಮಗ ನಿಂದ ಪ್ರಾರಂಭವಾದ ಚಿತ್ರಯಾತ್ರೆ, ನೀನ್ಯಾರೇ? ವರೆಗೆ ಮುಂದುವರೆದಿದೆ. ಅನುರಾಗ ಸಂಗಮ, ಜನುಮದ ಜೋಡಿ, ಜೋಡಿ ಹಕ್ಕಿ, ಗೆಜ್ಜೆನಾದ, ಓ ಮಲ್ಲಿಗೆ, ಚಿಗುರಿದ ಕನಸು, ಮಠ, ಮುನ್ನುಡಿ -ಹೀಗೆ ಮನೋಹರ್ ಸಂಗೀತದಾಟ, ಸಿನಿ ಪ್ರೇಮಿಗಳ ಮನಸೂರೆ ಮಾಡಿದೆ. ಹಾಡು ಕೇಳಿದವರು ಭಲೇ ಎಂದಿದ್ದಾರೆ.ಇನ್ನೇನು ಬೇಕ್ರೀ ಮನೋಹರ್?