Don't Miss!
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಪ್ಪು ಮೂರನೇ ಇನ್ನಿಂಗ್ಸು ಜೋರು
- ದಟ್ಸ್ಕನ್ನಡ ಬ್ಯೂರೋ
ನಮ್ಮ ರಾಮು ಥರದ ತೆಲುಗಿನ ನಿರ್ಮಾಪಕ ಕೆ.ಎಸ್.ರಾಮರಾವ್ಗೆ ಅಪ್ಪು ತುಂಬಾ ಹಿಡಿಸಿಬಿಟ್ಟಿದ್ದಾರೆ. ಹೊಸ ಹುಡುಗರ ಪೈಕಿ ಈತ ಗೆಲ್ಲುವ ಕುದುರೆ ಅನ್ನೋದು ರಾಮರಾವ್ ಲೆಕ್ಕಾಚಾರ. ಅದಕ್ಕೇ ಅವರು ಕೋಟಿಗಟ್ಟಲೆ ಬಂಡವಾಳ ಹೊತ್ತು ಕಾವೇರಿ ನಾಡಿಗೆ ಬಂದಿರೋದು. ಒಂದೇ ನಡೆಯಲ್ಲಿ ಒಂದೇ ಚಿತ್ರಕತೆಯನ್ನು ತೆಲುಗು ಹಾಗೂ ಕನ್ನಡದಲ್ಲಿ ತೆಗೆಯುವುದು ಅವರ ವ್ಯಾಪಾರಿ ತಂತ್ರ. ತೆಲುಗಿನಲ್ಲಿ ಜೂನಿಯರ್ ಎಂಟಿಆರ್- ಕನ್ನಡದ ಹುಡುಗಿ ರಕ್ಷಿತಾ ಜೋಡಿ. ಕನ್ನಡದಲ್ಲಿ ಪುನೀತ್ ಜೊತೆಗೆ ಬಹುಭಾಷಾ ಬೆಡಗಿ ಅನಿತಾ ಮೋಡಿ. ತೆಲುಗು ಚಿತ್ರದ ಹೆಸರು ‘ಆಂಧ್ರವಾಲಾ’.
ಚಿತ್ರಕತೆ-
ಕಥಾಪಾಕ
ಪ್ರಕಾಂಡ
ನಿರ್ದೇಶಕ
ಪೂರಿ
ಜಗನ್ನಾಥ್
ನಿರ್ದೇಶನ-
ಜಗನ್ನಾಥ್
ಅಸಿಸ್ಟೆಂಟ್
ಆಗಿ
ಪಳಗಿರುವ
ಮೇವರ್
ರಮೇಶ್
ಸಂಗೀತ
ನಿರ್ದೇಶನ-
ಚಕ್ರಿ
ಛಾಯಾಗ್ರಹಣ-
ವೆಂಕಟ್
ಆರ್.
ಪ್ರಸಾದ್...
ಇವರೆಲ್ಲ
ತೆಲುಗಿನ
ಹೆಸರುವಾಸಿ
ಕುಳಗಳು.
ಚಿತ್ರದಲ್ಲಿ
ಒಟ್ಟು
ಆರು
ಹಾಡುಗಳಿರುತ್ತವೆ.
ಈ
ಪೈಕಿ
ಒಂದು
ತೆಲುಗು
ಹಾಗೂ
ಕನ್ನಡ
ಚಿತ್ರದಲ್ಲಿ
ಕಾಮನ್ನು
ಎನ್ನುತ್ತಾರೆ
ರಾಮರಾವ್.
ಒಂದು
ವೇಳೆ
ಅದು
‘ಕಂತೆಲುಗು’
ಗೀತೆಯಾದರೆ
ಭಾಷಾಭಿಮಾನಿಗಳ
ಪ್ರತಿಭಟನೆಗೆ
ತೆರೆದುಕೊಳ್ಳಬೇಕಾಗುತ್ತೆ.
ಇಂಗ್ಲಿಷ್
ಹಾಡಾದರೆ
ಬಚಾವ್.
ಕನ್ನಡದ
ಚಿತ್ರಕ್ಕೆ
ತೆಲುಗಿನ
ತಂತ್ರಜ್ಞರ
ಕೈಲಿ
ಕೆಲಸ
ಮಾಡಿಸಿದಂತೆ,
ತೆಲುಗು
ಚಿತ್ರಕ್ಕೆ
ಕನ್ನಡದ
ತಂತ್ರಜ್ಞರ
ಕೈಲಿ
ಕೆಲಸ
ಮಾಡಿಸೋದು
ರಾಮರಾವ್
ಬಯಕೆ.
ಕಳೆದ ವಾರ ಚಿತ್ರದ ಮುಹೂರ್ತ ನಡೆಯಿತು. ಡಾ.ರಾಜ್ ಹಾಗೂ ಮಕ್ಕಳ ಸಂಸಾರ ಯಥಾಪ್ರಕಾರ ಅಪ್ಪುಗೆ ಆಶೀರ್ವಾದ ಕೊಟ್ಟು, ಶುಭ ಕೋರಿತು. ಗಂಡನ ಮೂರನೇ ಚಿತ್ರದ ಶೂಟಿಂಗ್ ಸಂಭ್ರಮ ಹಂಚಿಕೊಳ್ಳೋಕೆ ಪುನೀತ್ ಹೆಂಡತಿ ಕೂಡ ಇದ್ದರು. ಆಂಧ್ರದಿಂದ ಜೂನಿಯರ್ ಎನ್ಟಿಆರ್ ಬಂದಿದ್ದರು. ನಾಯಕಿ ಅನಿತಾ ಇಂಗ್ಲಿಷ್ನಲ್ಲಿ ನಗುತ್ತಿದ್ದರು. ತೆಲುಗಿನಲ್ಲಿ ಅರ್ಧ ಡಜನ್ ಚಿತ್ರದಲ್ಲಿ ಅಭಿನಯಿಸಿರುವ ಅನಿತಾಗೆ, ಕುಚ್ ತೋ ಹೈ ಎಂಬ ಹಿಂದಿ ಚಿತ್ರದಲ್ಲೂ ನಟಿಸಿರುವ ಅನುಭವ ಇದೆ. ಮೆಗಾ ಧಾರಾವಾಹಿ ಮೂಲಕ ತೆರೆಗೆ ಪರಿಚಯಿಸಿದ ಏಕ್ತಾ ಕಪೂರ್ ಈಕೆಯ ಗಾಡ್ ಮದರ್ರು !
ಈಗಾಗಲೇ ಎರಡು ಹಾಡುಗಳ ಚಿತ್ರೀಕರಣ ಮುಗಿಸಿರುವ ಚಿತ್ರಕ್ಕೆ ಹೆಸರಿಡಲು ತೆರೆಮರೆಯಲ್ಲಿ ಮಂಥನ ನಡೆದಿದೆ. ಈ ಚಿತ್ರ ಪುನೀತ್ ಇಮೇಜನ್ನು ದುಪ್ಪಟ್ಟಾಗಿಸುತ್ತದೆ ಅನ್ನೋದು ರಾಮರಾವ್ ನಂಬಿಕೆ. ‘ನನ್ನದು ಫ್ರ್ಯಾಂಕ್ ಕ್ಯಾರೆಕ್ಟರ್. ಕಥೆ ಚೆನ್ನಾಗಿತ್ತು. ಟೀಂ ಚೆನ್ನಾಗಿತ್ತು. ಹೋಂ ಬ್ಯಾನರಲ್ಲೇ ಮೂರನೇ ಚಿತ್ರ ಮಾಡಬೇಕೆಂಬ ಅನೇಕರ ಆಸೆಯನ್ನು ಆ ಕಾರಣಕ್ಕೇ ಮೀರಬೇಕಾಯಿತು. ನನ್ನ ಇಮೇಜನ್ನು ಡಬ್ಬಲ್ ಮಾಡೋದು ನಿರ್ದೇಶಕರಿಗೆ ಬಿಟ್ಟ ಕೆಲಸ. ಒಟ್ಟಿನಲ್ಲಿ ಕಥೆಗೇ ನನ್ನ ಮೊದಲ ಪ್ರಿಫರೆನ್ಸ್. ಈ ಚಿತ್ರ ಕಾಮಿಡಿ ವಿತ್ ಥ್ರಿಲ್. ಕಥೆ- ಹೇಳೋಲ್ಲ, ಸಸ್ಪೆನ್ಸ್ ’ ಎಂದು ಪುನೀತ್ ನಕ್ಕರು.
ಮುಖಪುಟ / ಸ್ಯಾಂಡಲ್ವುಡ್