ಆರೋಪಗಳೆಲ್ಲಾ ಶುದ್ಧ ಸುಳ್ಳು: ಚೇತನ್ ತಿರುಗೇಟು

ಇನ್ನು 'ಮರೆಯಲಾರೆ' ಎಂಬ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಲು ಹೊರಟಿದ್ದ ಶರತ್ ಕದ್ರಿ "ಶೂಟಿಂಗ್ ಶುರುವಾದ ಮೇಲೆ ಕಿರಿಕ್ ಆರಂಭಿಸಿದ ಚೇತನ್, ನಿರ್ದೇಶನದಲ್ಲೂ ಮೂಗು ತೂರಿಸಿದರು. ಅವರಿಂದಾಗಿಯೇ ನನ್ನ ಚಿತ್ರ ನಿಂತು ಹೋಗಿದೆ. ಅದೇ ಕಹಿ ನೆನಪಿನಲ್ಲಿ ನಾನೀಗ 'ಸ್ಯಾಂಡಲ್ವುಡ್ ಸರಿಗಮ' ಎಂಬ ಚಿತ್ರವನ್ನು ಮಾಡುತ್ತಿದ್ದೇನೆ. ಹಲವು ಹೀರೋಗಳ ಮನೆ ಬಾಗಿಲು ತಟ್ಟಿದಾಗ ಆದ ಅನುಭವ ಮತ್ತು ಚೇತನ್ರನ್ನು ಹಾಕಿಕೊಂಡು ನಿರ್ದೇಶಿಸಲು ಹೋದ ಅನುಭವವನ್ನು ಈ ಚಿತ್ರದಲ್ಲಿ ಹೇಳಲಿದ್ದೇನೆ" ಎಂದಿದ್ದಾರೆ.
ಇವೆಲ್ಲಕ್ಕೂ ಚೇತನ್ "ಎಲ್ಲವೂ ಶುದ್ಧ ಸುಳ್ಳು. ನನ್ನಿಂದಾಗಿ ಯಾರಿಗೂ ತೊಂದರೆಯಾಗಿಲ್ಲ. ನಾನಂತೂ ನಿರ್ದೇಶನದಲ್ಲಿ ಮೂಗು ತೂರಿಸಲು ಹೋಗಿಲ್ಲ. ಆದರೆ ಅವರು ಶೂಟಿಂಗ್ ಅರ್ಧ ಮುಗಿದ ನಂತರ, ತಾನೇ ಸ್ವತಃ ನಟಿಸುವ ಸಲುವಾಗಿ ಪಾತ್ರ ಸೃಷ್ಟಿಗೆ ಮುಂದಾದರು. ಕಥೆಯಲ್ಲಿ ಬದಲಾವಣೆಗೆ ಯತ್ನಿಸಿದರು. ಇದನ್ನು ನಾನು ಸಹಿಸಲಿಲ್ಲ. ಅಷ್ಟಕ್ಕೇ ಅವರು ನನ್ನ ಚಿತ್ರವನ್ನು ನಿಲ್ಲಿಸಿದ್ದಾರೆ. ನನ್ನದೇ ಹೆಸರಿನಲ್ಲಿ ಚಿತ್ರವನ್ನೂ ಮಾಡುತ್ತಿದ್ದಾರೆ. ಅವರಿಗೆ ಶುಭವಾಗಲಿ" ಎಂದು ಪ್ರತ್ಯುತ್ತರ ನೀಡಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











