Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೈಲಿನಲ್ಲಿ ಪೌರಾಣಿಕ ಪಾತ್ರ ಒಲ್ಲೆ ಎಂದ ದರ್ಶನ್
ಇಷ್ಟುದಿನ ಬೆಳ್ಳಿಪರದೆ ಮೇಲೆ ಮಿಂಚುತ್ತಿದ್ದ ನಟ ದರ್ಶನ್ಗೆ ಮತ್ತೆ ರಂಗಭೂಮಿಯಲ್ಲಿ ಬಣ್ಣ ಹಚ್ಚುವ ಚಾನ್ಸ್ ಸಿಕ್ಕಿತ್ತು. ಆದರೆ ಈ ಅಪೂರ್ವ ಅವಕಾಶವನ್ನು ಕೈಯಾರೆ ಕಳೆದುಕೊಂಡಿದ್ದಾರೆ ದರ್ಶನ್. ಪರಪ್ಪನ ಅಗ್ರಹಾರದ ಡಿ ಬ್ಲಾಕ್ನಲ್ಲಿ ಮೌನ ಮುಸುಕಿದ ವಾತಾವರಣ.
ಜೈಲಿನಲ್ಲಿರುವ ಕೆಲವು ಕೈದಿಗಳು ಮಂಗಳವಾರ (ಸೆ.27)ದರ್ಶನ್ರನ್ನು ಭೇಟಿ ಮಾಡಿ, ಅಕ್ಟೋಬರ್ನಲ್ಲಿ ಪೌರಾಣಿಕ ನಾಟಕವೊಂದನ್ನು ಆಡಬೇಕೆಂದಿದ್ದೇವೆ. ಅಣ್ಣಾ ನೀವೊಂದು ಪಾರ್ಟ್ ಮಾಡಬೇಕು ಎಂದು ವಿನಂತಿಸಿಕೊಂಡಿದ್ದರು. ಇದಕ್ಕೆ ನಟ ದರ್ಶನ್ ಆಗಲ್ಲ ಎಂದು ಕೈಯಾಡಿಸಿ ಕಳಿಸಿದ್ದಾರೆ.
ಬಳಿಕ ಜೈಲು ಅಧಿಕಾರಿಗಳನ್ನು ಭೇಟಿ ಮಾಡಿದ ಕೈದಿಗಳು "ಸಾರ್ ಒಸಿ ನೀವಾದರೂ ಹೇಳಿ. ನಾಟಕದಲ್ಲಿ ಪಾರ್ಟು ಮಾಡಲು ದರ್ಶನ್ರನ್ನು ಒಪ್ಪಿಸಿ" ಎಂದು ವಿನಂತಿಸಿಕೊಂಡಿದ್ದಾರೆ. ನಮ್ಮದೇನು ತಕರಾರಿಲ್ಲವಯ್ಯ. ನೀವೇ ಇನ್ನೊಂದಪ ಮಾತನಾಡಿಸಿ ಒಪ್ಪಿಸಿ ಎಂದು ಕೈತೊಳೆದುಕೊಂಡಿದ್ದಾರೆ.
ಇತ್ತ ಜೂನಿಯರ್ ಕಟ್ಟಾ ಜೊತೆ ಡಿ ಬ್ಲಾಕ್ ಸೆಲ್ನಲ್ಲಿ ಅದ್ಯಾವುದೋ ಪುಸ್ತಕದಲ್ಲಿ ದರ್ಶನ್ ಮಗ್ನರಾಗಿದ್ದಾರೆ. ಮಹಾಲಯ ಅಮಾವಾಸ್ಯೆದಿನ (ಸೆ.27) ದರ್ಶನ್ ಊಟದ ಮೆನುವಿನಲ್ಲಿ ವಿಶೇಷವೇನು ಇರಲಿಲ್ಲ. ಬೆಳಗ್ಗೆ ಚಿತ್ರಾನ್ನ. ಮಧ್ಯಾಹ್ನ ಅನ್ನ ಸಾಂಬಾರ್ ತಿಂದು ಮಲಗಿದ್ದಾರೆ. (ದಟ್ಸ್ಕನ್ನಡ ಸಿನಿವಾರ್ತೆ)