ಅಗ್ನಿ ಎದೆಗಾರಿಕೆಯಲ್ಲಿ ಸಾವು ಪ್ರೀತಿಯ ಮುಖಾಮುಖಿ

"ಭೂಗತಲೋಕದಲ್ಲಿ ಪ್ರತಿ ಹಂತಕನಿಗೂ ಇನ್ನೊಬ್ಬ ಹಂತಕ ಇರುತ್ತಾನೆ ಎಂಬುದು ಅಲಿಖಿತ ನಿಯಮ. ಈ ಚಿತ್ರದಲ್ಲಿ ಕೊಲೆಗಾರನೊಬ್ಬನಿಗೆ ಕೊಲೆಯಾಗುವ ಸಂದರ್ಭ ಬಂದಾಗ ಕೊಲೆಯಾಗುವ ವ್ಯಕ್ತಿಯ ಮನಸ್ಸಿನ ಭಾವನೆ, ಸಂಕಟ ತಳಮಳಗಳು ಹೇಗೆ ಅರ್ಥವಾಗುತ್ತವೆ. ಅದು ಅವನಿಗೆ ಹೇಗೆ ಬದುಕಿನ ದರ್ಶನವನ್ನು ಮಾಡಿಸುತ್ತದೆ ಎಂಬ ಸೂಕ್ಷ್ಮ ಸಂವೇದನೆ ಈ ಚಿತ್ರದ ತಿರುಳು.
ಇಲ್ಲಿ ಕೊಲೆ ಮಾಡುವ ಹಾಗೂ ಕೊಲೆ ಆಗಲಿರುವ ವ್ಯಕ್ತಿ ಪರಸ್ಪರ ಎದುರಾಗುತ್ತಾರೆ, ಮಾತನಾಡುತ್ತಾರೆ. ಅನೇಕ ವಿಷಯಗಳನ್ನು ಚರ್ಚಿಸುತ್ತಾರೆ. ಆದರೆ ತನ್ನಿಂದ ಕೊಲೆ ಆಗಲಿರುವ ವ್ಯಕ್ತಿ ಎದುರು ಕುಳಿತಿರುವವನೇ ಎಂಬುದು ಕೊಲೆಗಾರನಿಗೆ ಗೊತ್ತಿರುವುದಿಲ್ಲ. ಹಾಗೇ ತನ್ನ ಎದುರು ಕುಳಿತಿರುವ ವ್ಯಕ್ತಿಯೇ ತನ್ನನ್ನು ಕೊಲೆ ಮಾಡಲು ಬಂದಿರುವುದು ಎಂಬ ಸತ್ಯ ಕೊಲೆಯಾಗುವ ವ್ಯಕ್ತಿಗೂ ಗೊತ್ತಿರುವುದಿಲ್ಲ.
ಆದರೆ ನಿಜಾಂಶ ಗೊತ್ತಾದಾಗ ಇವರಿಬ್ಬರ ನಡುವೆ ಮೂಡುವ ಭಾವನೆಗಳ ತಾಕಲಾಟ ಇದೆಯಲ್ಲ, ಅದನ್ನೇ ಚಿತ್ರಕಥೆಯಲ್ಲಿ ರೋಚಕವಾಗಿ ವಿವರಿಸಲಾಗಿದೆ. ಜೀವನವಿಡೀ ಕೊಲೆಯನ್ನೇ ಕಸುಬನ್ನಾಗಿ ಮಾಡಿಕೊಂಡವನಿಗೆ ಸಾವಿನ ದರ್ಶನ ಕೊಡುವ ಪಾಠ ಇಲ್ಲಿದೆ. ಅದನ್ನು ಸಿನಿಮಾ ಎಂಬ ದೃಶ್ಯಮಾಧ್ಯಮದಲ್ಲಿ ಪರಿಣಾಮಕಾರಿಯಾಗಿ ತೋರಿಸಲಾಗುವುದು" ಎಂಬ ಅಗ್ನಿ ಶ್ರೀಧರ್ ಅವರ ಮಾತು ಎಲ್ಲರ ಕುತೂಹಲಕ್ಕೆ ಕಾರಣವಾಗಿರುವುದು ಸುಳ್ಳಲ್ಲ. ಮುಂದಿನ ಪುಟದಲ್ಲಿ ಮುಂದುವರಿದಿದೆ...


Click it and Unblock the Notifications











