ಜೆಡಿಎಸ್ ಗೆ 'ಶ್ರುತಿ' ಆಹ್ವಾನಿಸಿದ ಎಚ್.ಡಿ. ಕುಮಾರಸ್ವಾಮಿ

Shruti
ಕನ್ನಡದ ನಟಿ ಶ್ರುತಿಗೆ ಮಾಜಿ ಕುಮಾರಸ್ವಾಮಿ ಜೆಡಿಎಸ್ ಸೇರಲು ಆಹ್ವಾನ ಇತ್ತಿದ್ದಾರೆ. "ಪ್ರಸಿದ್ಧ ಕಲಾವಿದೆ ಶ್ರುತಿ ಬಿಜೆಪಿ ಸೇರಿ ತಪ್ಪು ಮಾಡಿದರು. ಸರಿಯಾದ ಪಕ್ಷಕ್ಕೆ ಹೋದರೆ ಅವರಿಗೆ ಭವಿಷ್ಯವಿದೆ. ಜೆಡಿಎಸ್ ಪಕ್ಷಕ್ಕೆ ಸೇರಿದರೆ 6 ಕೋಟಿ ಜನತೆಗೆ ಸೇವೆ ಸಲ್ಲಿಸುವ ಭಾಗ್ಯ ದೊರಕುತ್ತದೆ" ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ.

ಭಾನುವಾರ (27.11.2011), ಕೆಂಪೇಗೌಡರ 'ಮಾಗಡಿ ಹಬ್ಬ'ವನ್ನು ಉದ್ಘಾಟಿಸಿ ಮಾತನಾಡಿದ ಕುಮಾರಸ್ವಾಮಿ, "ನಾನು ಬಡವರ ಪರ ಕೆಲಸ ಮಾಡಲು ಡಾ.ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ ಪ್ರೇರಣೆ. ಆ ಚಿತ್ರವನ್ನು 60 ಬಾರಿ ನೋಡಿದ್ದೇನೆ" ಎಂದರು. ಚಿತ್ರರಂಗಕ್ಕೂ ತಮಗೂ ಇರುವ ನೇರ ಸಂಬಂಧವನ್ನು ಬಿಚ್ಚಿಟ್ಟರು.

ಅದೇ ರೀತಿ ಡಾ.ವಿಷ್ಣುವರ್ಧನ್ ಅವರ ನಾಯಕತ್ವದಲ್ಲಿ 'ಸೂರ್ಯವಂಶ' ಚಿತ್ರ ಮಾಡಿದೆ. ನಮ್ಮ ಕುಟುಂಬದ ನೈಜ ಘಟನೆಯನ್ನು ತೋರಿಸುವಂತಹ ಈ ಚಿತ್ರ ರಾಜ್ಯದ ಮನೆ ಮಾತಾಯಿತು. ಇದು ನನ್ನ ಜೀವಮಾನದಲ್ಲಿ ಮರೆಯಲಾಗದ ಚಿತ್ರ ಎಂದರು ಕುಮಾರಸ್ವಾಮಿ. ಕುಮಾರ ಸ್ವಾಮಿಯ ಆಹ್ವಾನಕ್ಕೆ ಶ್ರುತಿಯ ಉತ್ತರ ಇನ್ನಷ್ಟೇ ತಿಳಿಯಬೇಕಾಗಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Former CM Kumaraswamy Invited kannada actress Shruti to Join JDS. He told this in Kempegowda Magadi Festival. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X