Just In
- 32 min ago
ದೀಪಿಕಾ, ಸಿದ್ಧಾರ್ಥ್, ಸುಮಲತಾ ಭೇಟಿಯಾಗಿ ದೋಸೆ ತಿನ್ನಲು ವಿದ್ಯಾರ್ಥಿ ಭವನಕ್ಕೆ ಬಂದ ಬರ್ನಿ ಸ್ಯಾಂಡರ್ಸ್
- 59 min ago
ಸಮಂತಾ ಜಿಮ್ಗೆ ಹೋಗಲು ಶುರು ಮಾಡಿದ್ದು ಏಕೆ? ಸೀಕ್ರೆಟ್ ಬಿಚ್ಚಿಟ್ಟ ನಟಿ
- 1 hr ago
ಇಬ್ಬರು ನಟರು ನಿರಾಕರಿಸಿದ್ದ ಸಿನಿಮಾದಲ್ಲಿ ಅಲ್ಲು ಅರ್ಜುನ್, ವಿಜಯ್ ದೇವರಕೊಂಡ
- 1 hr ago
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
Don't Miss!
- Automobiles
ಹ್ಯುಂಡೈ ವಿವಿಧ ಕಾರುಗಳ ಬೆಲೆಯಲ್ಲಿ ಗರಿಷ್ಠ ರೂ.45 ಸಾವಿರ ತನಕ ಹೆಚ್ಚಳ
- News
ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ಬಾಂಬೆ ಹೈಕೋರ್ಟ್ ವಿವಾದಾತ್ಮಕ ತೀರ್ಪಿಗೆ ಸುಪ್ರೀಂ ತಡೆ
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ಮಿನಿ ಹರಾಜಿನ ದಿನಾಂಕ ಹಾಗೂ ಸ್ಥಳ ಅಧಿಕೃತ ಘೋಷಣೆ
- Lifestyle
ನೀವೊಬ್ಬ ಒಳ್ಳೆಯ ಪತಿಯಾಗಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಣ್ಣ ಹಚ್ಚಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಎಚ್ ಡಿ ಕುಮಾರಸ್ವಾಮಿ ಅವರಿಗೂ ಸಿನಿಮಾಗೂ ಹಳೆಯ ನಂಟು. ಈ ನಂಟು ಈಗ ಮತ್ತೆ ಅವರು ಬಣ್ಣ ಹಚ್ಚುವಂತೆ ಮಾಡಿದೆ. ತಮ್ಮ ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ನಡುವೆ ಕುಮಾರಸ್ವಾಮಿ ಕೊಂಚ ಬಿಡುವು ಮಾಡಿಕೊಂಡು 'ಶಿವಕಾಶಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆ ಮೇಲೆ ಕುಮಾರಸ್ವಾಮಿ ಭಾಷಣ ಬಿಗಿಯುವ ಸನ್ನಿವೇಶವನ್ನು ಸೆರೆಹಿಡಿಯಲಾಯಿತು. ವೇದಿಕೆ ಮೇಲೆ 'ಮುಂಗಾರು ಮಳೆ' ನಿರ್ಮಾಪಕ ಈ ಕೃಷ್ಣಪ್ಪ, ಜೆಡಿಎಸ್ ನಾಯಕ ಗೋಪಾಲಯ್ಯ ಮತ್ತಿತರು ಉಪಸ್ಥಿತರಿದ್ದರು. ಕುಮಾರಸ್ವಾಮಿ ಅಭಿನಯದ ಇನ್ನೊಂದು ದೃಶ್ಯವನ್ನು ಮಂಡ್ಯದಲ್ಲಿ ಚಿತ್ರೀಕರಿಸಿಕೊಳ್ಳಲಾಗುತ್ತದಂತೆ.
ಕುಮಾರಸ್ವಾಮಿ ಅವರು ಬಣ್ಣ ಹಚ್ಚಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು 'ಪ್ರೀತಿ ಏಕೆ ಭೂಮಿ ಮೇಲಿದೆ' ಹಾಗೂ 'ಸಿದ್ಧಗಂಗಾ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. 'ಶಿವಕಾಶಿ' ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಬಿ.ರಾಮ್ಪ್ರಕಾಶ್. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು ಗಂಧರ್ವ ಅವರ ಸಂಗೀತ ಸಂಯೋಜನೆಯಿದೆ.
ಮಂಡ್ಯದ ಮಹದೇವಯ್ಯ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶಿವ ಮತ್ತು ಕಾಶಿ ಎಂಬ ಇಬ್ಬರು ಯುವಕರ ಸುತ್ತ ಕತೆ ಸುತ್ತುತ್ತದೆ. ಅಜಿತ್ ಮತ್ತು ಯೋಗೀಶ್ವರ್ ಚಿತ್ರದ ನಾಯಕ ನಟರು. ಚಿತ್ರಕ್ಕೆ ನಾಯಕಿ ಒಬ್ಬಳೆ ಮಾನಸಿ. ಅನಂತನಾಗ್ ಮತ್ತು ಲಕ್ಷ್ಮಿ ಜೋಡಿಯನ್ನು ಇಲ್ಲಿ ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದು. ಸ್ವಾಮಿ ನಿತ್ಯಾನಂದನ ಪರಮ ಭಕ್ತೆ ರಂಜಿತಾ ಚಿತ್ರದ ಹಾಡೊಂದರಲ್ಲಿ ಅಭಿನಯಿಸಲಿದ್ದಾರೆ ಎಂಬುದು ಈ ಚಿತ್ರದ ಲೇಟೆಸ್ಟ್ ಸುದ್ದಿ.