Don't Miss!
- News IT Company: ಐಟಿ-ಬಿಟಿ ಕಂಪನಿಗಳಿಗೆ ಜಲಮಂಡಳಿಯ ನೀರಿನ ಭರವಸೆ
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಭಾರ್ಗವ
ಜನಪ್ರಿಯ ಚಲನಚಿತ್ರ ನಿರ್ದೇಶಕ ಎಚ್ ಆರ್ ಭಾರ್ಗವ ಅವರನ್ನು 2008-09ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಲು ಸರ್ಕಾರ ತೀರ್ಮಾನಿಸಿದೆ. ಭಾರ್ಗವ ಅವರು ಸುಮಾರು 50 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 2008-09ನೇ ಸಾಲಿನ ರಾಜ್ಯ ಪ್ರಶಸ್ತಿಗಾಗಿ 74 ಚಿತ್ರಗಳು ಸ್ಪರ್ಧಿಸಿವೆ. ರಾಜ್ಯ ಪ್ರಶಸ್ತಿಗಾಗಿ ದಾಖಲೆ ಸಂಖ್ಯೆಯ ಚಿತ್ರಗಳು ಸ್ಪರ್ಧಿಸಿರುವುದು ಕನ್ನಡ ಚಲಚಿತ್ರಇತಿಹಾಸಲ್ಲಿ ಇದೇ ಮೊದಲು.
ಭಾರ್ಗವ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತ ಬಾಬು ದಿನಕರ್, ನಿರ್ದೇಶಕರಾದ ಕೆ ವಿ ರಾಜು ಹಾಗೂ ಡಿ ರಾಜೇಂದ್ರ ಬಾಬು, ಜಾನಪದ ಗಾಯಕ ಬಾನಂದೂರು ಕೆಂಪಯ್ಯ, ಹಿರಿಯ ನಟ ಹಾಗೂ ಬಿಜೆಪಿ ಧುರೀಣ ರಾಜೇಶ್, ಪ್ರಸಿದ್ಧ ಛಾಯಾಗ್ರಾಹಕ ಬಿ ಎಸ್ ಬಸವರಾಜ್, ರಂಗಭೂಮಿ ಕಲಾವಿದೆ ಸುಜಾತ ಹಾಗೂ ವಾರ್ತಾ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿಗಳು ಇರುತ್ತಾರೆ.
ಸ್ಪರ್ಧೆಯಲ್ಲಿ ಶತದಿನೋತ್ಸವ ಆಚರಿಸಿಕೊಂಡ ಚಿತ್ರಗಳ ಜೊತೆಗೆ ಹೆಚ್ಚಾಗಿ ಹೊಸಬರ ಚಿತ್ರಗಳು ಇವೆ. ಐದು ಫಿಲಂ ಫೇರ್ ಪ್ರಶಸ್ತಿಗಳನ್ನು ಪಡೆದಿದ್ದ ಮೊಗ್ಗಿನ ಮನಸು, ರಾಷ್ಟ್ರಪ್ರಶಸ್ತಿಗೆ ಪಾತ್ರವಾಗಿದ್ದ ತುಳು ಚಿತ್ರ ಗಗ್ಗರ, ಪಿ ಶೇಷಾದ್ರಿ ಅವರ ವಿಮುಕ್ತಿ ಹಾಗೂ ಎಂ ಎಸ್ ಸತ್ಯು ಅವರ ಇಜ್ಜೋಡು ಸಹ ಪ್ರಶಸ್ತಿಗಾಗಿ ಸ್ಪರ್ಧಿಸಿವೆ.
ಸಹಾಯಧನಕ್ಕಾಗಿ
101
ಚಿತ್ರಗಳು
ಕನ್ನಡ
ಚಿತ್ರಗಳಿಗೆ
ಸಹಾಯಧನ
ನೀಡುವ
ಆಯ್ಕೆ
ಸಮಿತಿ
ಅಧ್ಯಕ್ಷರನ್ನಾಗಿ
ನಿರ್ದೇಶಕ
ಮತ್ತು
ಸಾಹಿತಿ
ಸಿ
ವಿ
ಶಿಶಂಕರ್
ಅವರನ್ನು
ಆಯ್ಕೆ
ಮಾಡಲಾಗಿದೆ.
ಸಹಾಯಧನಕ್ಕಾಗಿ
101
ಚಿತ್ರಗಳು
ಅರ್ಜಿ
ಸಲ್ಲಿಸಿರುವುದು
ವಿಶೇಷ.
ಈ
ಎಲ್ಲಾ
ಚಿತ್ರಗಳಲ್ಲಿ
ಕೇವಲ
50
ಚಿತ್ರಗಳನ್ನು
ಮಾತ್ರ
ಆಯ್ಕೆ
ಮಾಡಲಾಗುತ್ತದೆ.
ಆಯ್ಕೆಯಾದ
ಚಿತ್ರಗಳಿಗೆ
ತಲಾ
ರು.10
ಲಕ್ಷ
ಸಹಾಯಧನ
ಸಿಗಲಿದೆ.
ಕೆ ವಿ ಗುಪ್ತಾ, ಎಚ್ ಎಂ ಕೆ ಮೂರ್ತಿ,ಪ್ರೊ. ಎಚ್ ಜಿ ಸಿದ್ದರಾಮಯ್ಯ, ಎಚ್ ಆರ್ ಮಧುಸೂದನ ರೆಡ್ಡಿ, ಹಿರಿಯ ಪತ್ರಕರ್ತೆ ಡಾ.ಆರ್ ಪೂರ್ಣಿಮಾ, ಹಿರಿಯ ನಟಿ ಬಿ ವಿ ರಾಧಾ ಹಾಗೂ ಕರ್ನಾಟಕ ಚಲನಚಿತ್ರ ಅಧ್ಯಕ್ಷರು ಹಾಗೂ ವಾರ್ತಾ ಮತ್ತು ಪ್ರಸಾರ ಇಲಾಖೆ ನಿರ್ದೇಶಕರು ಸದಸ್ಯರಾಗಿರುತ್ತಾರೆ.