Don't Miss!
- News Neha Hiremath: ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಲ್ಮಾನ್ ಖಾನ್ ನಂತೆ ಬಾಡಿಗಾರ್ಡ್ ಆದ ಜಗ್ಗೇಶ್
ಮಲೆಯಾಳಂನಲ್ಲಿ ಯಶಸ್ವಿಯಾದ ಫಾರ್ಮೂಲಾನ ತಮಿಳರು ಕದ್ದರು ಆಮೇಲೆ ಹಿಂದಿಗೂ ಹೋಗಿದೆ. ಕಾಮಿಡಿ ಹಾಗೂ ಲವ್ ಕಥೆ ಇರುವ ಬಾಡಿಗಾರ್ಡ್ ಚಿತ್ರ ಈಗ ಕನ್ನಡದಲ್ಲೂ ರಿಮೇಕ್ ಆಗುತ್ತಿದೆ. ಹಿಂದಿಯಲ್ಲಿ ಸಲ್ಮಾನ್ ನಂತೆ ಕನ್ನಡದಲ್ಲಿ ಬಾಡಿಗಾರ್ಡ್ ಆಗಲು ನವರಸನಾಯಕ ಜಗ್ಗೇಶ್ ಸಜ್ಜಾಗಿದ್ದಾರೆ.
ಮೂಲ ಮಲೆಯಾಳಂನಲ್ಲಿ ದಿಲೀಪ್ ನಟಿಸಿದ್ದರು. ತಮಿಳಿನಲ್ಲಿ ವಿಜಯ್, ಹಿಂದಿಯಲ್ಲಿ ಸಲ್ಮಾನ್ ನಟಿಸಿದ್ದಾರೆ. ಕನ್ನಡದಲ್ಲಿ ಉತ್ತಮ ಚಿತ್ರಗಳನ್ನು ನೀಡಿದ ನಿರ್ದೇಶಕ ಕೆವಿ ರಾಜು ಅವರ ಶಿಷ್ಯ ಆನಂದ್ ಅವರು ಮೊದಲ ಬಾರಿಗೆ ಜಗ್ಗೇಶ್ ಅವರನ್ನು ನಿರ್ದೇಶಿಸುತ್ತಿದ್ದಾರೆ.
ಹತ್ತು ವರ್ಷಗಳ ಗ್ಯಾಪ್ ನಂತರ ಕೆವಿ ರಾಜು ಅವರು ನಿರ್ದೇಶಿಸಿರುವ ರಾಜಧಾನಿ ಸಿನಿಮಾಕ್ಕೆ ಉತ್ತಮ ವಿಮರ್ಶೆ ಸಿಕ್ಕಿದೆ. ಬೆಳ್ಳಿ ಮೋಡಗಳು, ಕದನ, ಇಂದ್ರಜೀತ್, ಯುದ್ಧಕಾಂಡ, ಹುಲಿಯಾ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ ರಾಜು ಅವರಿಂದ ಸಕಲ ವಿದ್ಯೆಗಳನ್ನು ಕಲಿತಿರುವ ಆನಂದ್ ಬಗ್ಗೆ ಜಗ್ಗೇಶ್ ಭರವಸೆ ಮಾತುಗಳನ್ನಾಡಿದ್ದಾರೆ. ಮಿನಿಮಮ್ ಗ್ಯಾರಂಟಿ ನಟ ಜಗ್ಗೇಶ್ ಅವರು ಕಾಸಿಗೆ ತಕ್ಕ ಕಜ್ಜಾಯವಂತೂ ನೀಡುತ್ತಾರೆ. ಸದ್ಯಕ್ಕೆ ಜಗ್ಗೇಶ್ ಯಾವ ನಟಿಗೆ ಬಾಡಿಗಾರ್ಡ್ ಆಗಲಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ.