ಯುವ ವೈದ್ಯನ ಮನೋ ವೃತ್ತಾಂತವೇ 'ಮಿಂಚು'
ಲಕ್ಷ್ಮಿ ನರಸಿಂಹಸ್ವಾಮಿ ಕ್ರಿಯೇಷನ್ಸ್ ಅರ್ಪಿಸಿರುವ ವಿಶಾಲ್ ರಾಜ್ ಚಿತ್ರಕಥೆ ಬರೆದು ನಿರ್ದೇಶಿಸಿರುವ 'ಮಿಂಚು' ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಕಾಣಲಿದೆ. ನಿರಾಶೆಗೊಳಗಾದ ಯುವ ವೈದ್ಯನೊಬ್ಬನ ಮನಃಸ್ಥಿತಿಯ ಬಗ್ಗೆ ಈ ಕಥೆಯನ್ನು ರಚಿಸಿದ್ದು, ಸಮಾಜ ಯುವಕರನ್ನು ಕೆಟ್ಟ ರೀತಿಯಿಂದ ನೋಡಿದಾಗ ಅವರು ಯಾವ ರೀತಿ ಬದಲಾಗುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ನಿರೂಪಿಸಲಾಗಿದೆ.
ವೇಣುಗೋಪಾಲ್ ಮತ್ತು ಸಹೋದರರು ನಿರ್ಮಿಸಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಎ.ಆರ್. ಶಮಂತ್. ಜೇಮ್ಸ್, ರಾಜೇಶ್ ರಾಮನಾಥ್ ಅವರ ಸಂಗೀತ ಸಂಯೋಜನೆ, ಯುವನ್ ಶಂಕರ್ ರಾಜಾ ಅವರ ಹಿನ್ನೆಲೆ ಸಂಗೀತ ಹಾಗೂ ವಿಲಿಯಮ್ ಅವರ ಛಾಯಾಗ್ರಹಣ ಇದ್ದು, ಸಿದ್ಧಾಂತ್, ಅರ್ಚನಾ, ಜೆನಿತ್ ಡೂಡ, ಜೈಜಗದೀಶ್, ಧರ್ಮ, ತುಳಸಿ ಶಿವಮಣಿ, ಮಂಡ್ಯ ರಮೇಶ್, ವಿನಯಾಪ್ರಕಾಶ್, ನೀನಾಸಂ ಅಶ್ವತ್ಥ್ ತಾರಾಗಣದಲ್ಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಅಂತಿಂತ ಹೆಣ್ಣು ನಾನಲ್ಲ ಎನ್ನುತ್ತಿರುವ ತ್ರಿಶಾ
ಕನ್ನಡದಲ್ಲಿ ತೇಲಿ ಬಂದ 'ಪೇಪರ್ ದೋಣಿ'
ನಾಗೇಶ್ ಚೆಲುವಿನ ಕೂಸು ಒಲವೇ ವಿಸ್ಮಯ!
ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಗಣೇಶ್ ಚಿತ್ರ


Click it and Unblock the Notifications











