Don't Miss!
- Automobiles Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೇ 11ಕ್ಕೆ ಉಪೇಂದ್ರ ಗಾಡ್ಫಾದರ್ ಚಿತ್ರ ಗ್ಯಾರಂಟಿ
ಮುನಿರತ್ನ ಹಾಗೂ ಕೆ ಮಂಜು ನಡುವಿನ ಜಟಾಪಟಿ ಈಗ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಶುಕ್ರವಾರ (ಏ.27) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಸಮಯ ನಡೆದ ಸಭೆಯಲ್ಲಿ ನಿರ್ಮಾಪಕ ಕೆ ಮಂಜುಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
ಇಬ್ಬರೂ ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿದ ಬಳಿಕ ಫಿಲಂ ಚೇಂಬರ್ ಕಾರ್ಯದರ್ಶಿ ಸಾ.ರಾ.ಗೋವಿಂದು ಅವರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಮಂಜು ಅವರು ತಮ್ಮ 'ಗಾಡ್ಫಾದರ್' ಚಿತ್ರವನ್ನು ಮೇ 8ರೊಳಗೆ ಸೆನ್ಸಾರ್ ಮಾಡಿಸಬೇಕು. ಒಂದು ವೇಳೆ ವಿಫಲರಾದರೆ ಮೇ 10ಕ್ಕೆ 'ಕಠಾರಿವೀರ ಸುರಸುಂದರಾಂಗಿ' ಬಿಡುಗಡೆ ಮಾಡಬಹುದು ಎಂದಿದ್ದಾರೆ.
'ಕಠಾರಿವೀರ' ಬಿಡುಗಡೆಯಾದ ನಂತರ ಎಂಟು ವಾರಗಳ ಬಳಿಕ ಮಂಜು ತಮ್ಮ 'ಗಾಡ್ಫಾದರ್' ಬಿಡುಗಡೆ ಮಾಡಬಹುದು ಎಂದು ಫಿಲಂ ಚೇಂಬರ್ ತೀರ್ಪು ನೀಡಿದೆ. ಈ ಬಗ್ಗೆ ತೃಪ್ತರಾಗದ ಮಂಜು ಕೋಪಗೊಂಡು ಸಭೆಯಿಂದ ಮಧ್ಯದಲ್ಲೇ ಎದ್ದು ಹೊರಹೋದ ಘಟನೆಯೂ ನಡೆದಿದೆ.
ಬಳಿಕ ಪ್ರತಿಕ್ರಿಯಿಸಿರುವ ಮಂಜು, "ಮೇ 7 ಅಥವಾ 8ರೊಳಗೆ ತಮ್ಮ 'ಗಾಡ್ಫಾದರ್' ಚಿತ್ರವನ್ನು ಸೆನ್ಸಾರ್ ಮಾಡಿಸುತ್ತೇನೆ. ಮೇ 11ಕ್ಕೆ ತಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತೇನೆ" ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಚಿತ್ರದ ಪ್ರಥಮ ಪ್ರತಿ ಇನ್ನೂ ರೆಡಿಯಾಗಿಲ್ಲ. ಆಡಿಯೋ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಬಗ್ಗೆಯೂ ಮಾಹಿತಿಯಿಲ್ಲ ಎನ್ನುತ್ತವೆ ಮೂಲಗಳು.
ಆದರೆ 'ಕಠಾರಿವೀರ' ಚಿತ್ರದ 2D ಮತ್ತು 3D ಆವೃತ್ತಿಗಳು ಸೆನ್ಸಾರ್ ಆಗಿದ್ದು ಮೇ 11ಕ್ಕೆ ಬಿಡುಗಡೆಯಾಗುವ ಎಲ್ಲಾ ಸೂಚನೆಗಳು ಇವೆ. ಇವರಿಬ್ಬರ ಗಲಾಟೆಯಲ್ಲಿ 'ಅಣ್ಣಾಬಾಂಡ್'ಗೆ ಲಾಭ ಆಗಿದೆ. ಮೇ 1ರಂದು ಬಿಡುಗಡೆಯಾಗುತ್ತಿರುವ ಪುನೀತ್ 'ಅಣ್ಣಾಬಾಂಡ್' ಮಾತ್ರ ಬಿಡುಗಡೆಯಾಗುತ್ತಿದ್ದು, ಚಿತ್ರಕ್ಕೆ ಯಾವುದೇ ಪ್ರತಿಸ್ಪರ್ಧಿಗಳಿಲ್ಲ. (ಒನ್ಇಂಡಿಯಾ ಕನ್ನಡ)