twitter
    For Quick Alerts
    ALLOW NOTIFICATIONS  
    For Daily Alerts

    ಹೊಂಗನಸು ಕಂಡ ಪ್ರೇಮ್ ಸಿಹಿಮುತ್ತಿನ ನಶೆಯಲ್ಲಿ

    By Staff
    |

    ನೆನಪಿರಲಿ ಪ್ರೇಮ್ ಎಂದೇ ಖ್ಯಾತರಾದ ಪ್ರೇಮ್ ಅವರ ನೆನಪಿರಲಿ ಚಿತ್ರದ ನಂತರ ಬಂದ ಚಿತ್ರಗಳು ಪ್ರೇಕ್ಷಕರ ನೆನಪಿನಲ್ಲಿ ಉಳಿಯಲೇ ಇಲ್ಲ. ಬಹು ನಿರೀಕ್ಷಿತ ಹೊಂಗನಸು ಹಾಗೂ ಗುಣವಂತ ಚಿತ್ರಗಳ ಸೋಲಿನಿಂದ ಚೇತರಿಸಿಕೊಳ್ಳುತ್ತಿರುವ ಪ್ರೇಮ್. ಹೊಸ ಹೆಜ್ಜೆ ಇಟ್ಟಿದ್ದಾರೆ. ಬಹು ತಾರಾಗಣದ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಲು ಒಪ್ಪಿದ್ದಾರೆ.

    ಗುರುವಾರ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಇದೇ ಮೊದಲ ಬಾರಿಗೆ ಕಾರ್ಪೊರೇಟ್ ವಲಯದ ಪರ್ಸೋನ ಪ್ರೊಡಕ್ಷನ್ ಕಂಪೆನಿ ನಿರ್ಮಿಸುತ್ತಿರುವ 'ಸಿಹಿಮುತ್ತು' ಚಿತ್ರ ಸೆಟ್ಟೇರಿತು.ಖ್ಯಾತ ಛಾಯಾಗ್ರಾಹಕ ಕಮ್ ನಿರ್ದೇಶಕ ಅಶೋಕ್ ಕಶ್ಯಪ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಪ್ರೇಮ್ ಅವರ ಜತೆಗೆ ಧ್ಯಾನ್ ಹಾಗೂ ಕೋಮಲ್ ನಟಿಸಲಿದ್ದಾರೆ. ಮುಂಬಯಿ ಬೆಡಗಿ ಡಿಂಪಲ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

    ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಾಗತಿಹಳ್ಳಿ ಚಂದ್ರಶೇಖರ್, ಲೇಖಕಿ ರೇಖಾ ರಾಣಿ, ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್ ,ಅಶೋಕ್ ಕಶ್ಯಪ್ ಅವರು 'ಸಿಹಿಮುತ್ತು 'ಚಿತ್ರದ ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪರ್ಸೋನಾ ಸಂಸ್ಥೆ ಪರವಾಗಿ ಸಿರೀಶ್ ಕುಮಾರ್, ನಾರಾಯಣಬಾಬು, ಪೂರ್ಣಿಮಾ ನಾರಾಯಣ್ ಮುಂತಾದವರು ಹಾಜರಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದರು.

    (ದಟ್ಸ್ ಸಿನಿವಾರ್ತೆ)

    Thursday, March 28, 2024, 16:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X